ಸಮಾಜದಲ್ಲಿ ಕ್ಷೀಣಿಸುತ್ತಿದೆ ಸೌಹಾರ್ದ ಭಾವನೆ

blank

ಮಾನ್ವಿ: ಸಮಾಜದಲ್ಲಿ ಅಶಾಂತಿ, ಕಲಹಗಳು ಅಸಹಿಷ್ಣುತೆ ಹೆಚ್ಚಾಗುತ್ತಿದ್ದು, ಸೌಹಾರ್ದ ಭಾವನೆ ಮತ್ತು ಶಾಂತಿ ಕಡಿಮೆಯಾಗುತ್ತಿದೆ ಎಂದು ಶ್ವೇತಾಂಬರ ಆಸ್ಥಾನಕವಾಸಿ ಜೈನ ಗುರು ನರೇಶ ಮುನೀಜಿ ಹೇಳಿದರು.

ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ರಾಯಚೂರಿಗೆ ಪಾದಯಾತ್ರೆ ತೆರಳುವ ಮಾರ್ಗದಲ್ಲಿ ಪಟ್ಟಣದಲ್ಲಿ ಜನರಿಗೆ ಶನಿವಾರ ಸಂದೇಶ ನೀಡಿದರು. ಜನರಲ್ಲಿ ನಂಬಿಕೆಗಳು ದೂರವಾಗುತ್ತಿದ್ದು, ಎಲ್ಲರನ್ನೂ ಪ್ರೀತಿಸುವ ಕೆಲಸವಾಗಬೇಕು ಎಂದರು. ಜೈನ ಮುನಿ ಸಾಲಿಭದ್ರ ಮುನಿಜಿ ಮಾತನಾಡಿ, ಪ್ರಾಣಿಗಳನ್ನು ಹಿಂಸೆ ಮಾಡದೆ ಪ್ರತಿಯೊಬ್ಬರೂ ಶಾಕಾಹಾರಿಗಳಾಗಬೇಕು. ವ್ಯಸನ ಮುಕ್ತರಾಗಿ ಆಹಿಂಸೆ, ಸತ್ಯ, ಧರ್ಮ, ನೀತಿ, ಬ್ರಹ್ಮಚರ್ಯ, ಪ್ರಾಮಾಣಿಕವಾದ ಸರಳ ಜೀವನವನ್ನು ನಡೆಸಿದಲ್ಲಿ ಪರಿವಾರ ಸ್ವರ್ಗದಂತಾಗಲಿದೆ. ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕಾಣುವುದಕ್ಕೆ ಸಾಧ್ಯವಾಗಲಿದೆ. ಜೈನಮುನಿಗಳು ವರ್ಷದ ಎಂಟು ತಿಂಗಳು ಪಾದಚಾರಿಗಳಾಗಿ ಸಂಚಾರಿಸಿ ಉಳಿದ ನಾಲ್ಕು ತಿಂಗಳಲ್ಲಿ ಚಾತುರ್ಮಾಸ್ಯ ವ್ರತವನ್ನು ಒಂದು ನಿರ್ದಿಷ್ಟ ಪ್ರದೇಶ ಅಯ್ಕೆ ಮಾಡಿಕೊಂಡು ಆಚರಿಸುತ್ತಾರೆ. ಈ ಸಮಯದಲ್ಲಿ ಜನರಿಗೆ ಉತ್ತಮ ಸಂದೇಶ ನೀಡಲಾಗುವುದು ಎಂದು ತಿಳಿಸಿದರು.

Share This Article

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…