ಕಚ್ಚಿದ ಹಾವನ್ನೇ ಜೀವಂತವಾಗಿ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ! ತರೀಕೆರೆಯಲ್ಲಿ ಘಟನೆ

ಚಿಕ್ಕಮಗಳೂರು: ಇಲ್ಲೊಬ್ಬ ಭೂಪ ತನ್ನನ್ನು ಕಚ್ಚಿದ ಹಾವನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಘಟನೆ ತರೀಕೆರೆ ತಾಲೂಕಿನಲ್ಲಿ ಸಂಭವಿಸಿದೆ. ಕೊಲ್ಕತ್ತಾ ಮೂಲದ ಆಸೀಫ್ ಹಾವಿನ ಸಮೇತ ಆಸ್ಪತ್ರೆಗೆ ಬಂದ ವ್ಯಕ್ತಿ. ತರೀಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸಕ್ಕೆಂದು ಬಂದಿದ್ದ ಆಸೀಫ್, ಊರಿಗೆ ಹೋಗಲು ರೈಲ್ವೆ ನಿಲ್ದಾಣದ ಬಳಿ ತೆರಳಿದ್ದ. ಈ ವೇಳೆ ಆಸೀಫ್​ಗೆ ಹಾವು ಕಚ್ಚಿದೆ. ಚಿಕಿತ್ಸೆ ಪಡೆಯಲು ಅನುಕೂಲವಾಗಲೆಂದು ಹಾಗೂ ತನಗೆ ಕಚ್ಚಿದ ಯಾವು ಯಾವುದೆಂದು ವೈದ್ಯರಿಗೆ ಗೊತ್ತಾಗಲೆಂದು ಆ ಹಾವನ್ನೇ ಕೈಯಲ್ಲಿ ಹಿಡಿದುಕೊಂದು ನೇರವಾಗಿ ಆಸ್ಪತ್ರೆಗೆ ತೆರಳಿದ್ದಾನೆ. … Continue reading ಕಚ್ಚಿದ ಹಾವನ್ನೇ ಜೀವಂತವಾಗಿ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ! ತರೀಕೆರೆಯಲ್ಲಿ ಘಟನೆ