ಸಿರವಾರ: ಪಟ್ಟಣದ ನೂರಾನಿ ಮಸೀದಿ ಕಮೀಟಿ ಹಾಗೂ ಮುಸ್ಲಿಂ ಸಮುದಾಯದಿಂದ ಕಾಶ್ಮೀರದ ಪಹಲ್ಗಾಮ್ ಘಟನೆ ಖಂಡಿಸಿ ಮತ್ತು ಉಗ್ರರ ದಾಳಿಗೆ ಹತರಾದವರ ಆತ್ಮಕ್ಕೆ ಶಾಂತಿ ಕೋರಿ ಶುಕ್ರವಾರ ಸಂಜೆ ಮೋಂಬತ್ತಿ ಬೆಳಗಿಸಿ ಸಂತಾಪ ಸೂಚಿಸಲಾಯಿತು.
ನೂರಾನಿ ಮಸೀದಿ ಕಮೀಟಿ ಅಧ್ಯಕ್ಷ ಮಹ್ಮದ್ವಲಿ ಗುತ್ತೇದಾರ ಮಾತನಾಡಿ, ಕಾಶ್ಮೀರ ಈ ದೇಶದ ಕಿರೀಟ ಹಾಗೂ ಪ್ರವಾಸೋದ್ಯಮದ ಪ್ರಮುಖ ಸ್ಥಳ. ಧರ್ಮದ ಹೆಸರಿನಲ್ಲಿ ಶಾಂತಿ ಕದಡಿದವರು ಯಾರೇ ಇರಲಿ ಅವರನ್ನು ಬಿಡಬಾರದು. ಇಡೀ ವಿಶ್ವಕ್ಕೆ ಶಾಂತಿ ಸಂದೇಶ ನೀಡುತ್ತಿರುವ ಭಾರತ ಸಮಯ ಬಂದಾಗ ತನ್ನ ಸಾಮರ್ಥ್ಯವನ್ನು ತೋರಿಸಿದೆ, ಮುಂದೆಯೂ ತೋರಿಸಲಿದೆ ಎಂದರು. ಪ್ರಮುಖರಾದ ಫಕೃದ್ದೀನ್ ಮರಡಿ, ಸದ್ದಾಂ ಜಂಗಿ, ರಿಯಾಜ್, ಇಬ್ರಾಹಿಂ ಎಲ್ಐಸಿ, ಅಜ್ಮೀರ್, ರಾಜಾ ಬಗರಿ, ಝಹೀರ್, ನದೀಮ್, ರಾಜಾ ಆಟೋ, ಮಹಮ್ಮದ್ ರಫಿ, ಮುಸ್ತಫಾ ಗಲಗ್ ಇತರರಿದ್ದರು.