More

    ಸ್ವಚ್ಛತೆ ಬರಿ ಘೋಷಣೆ ಆಗದಿರಲಿ

    ಸಿರಿಗೆರೆ: ಸ್ವಚ್ಛತೆ ಕೇವಲ ಘೋಷಣೆಯಲ್ಲ. ಒಂದು ದಿನಕ್ಕೆ ಮೀಸಲಾದ ಕೆಲಸವೂ ಅಲ್ಲ. ಇದು ನಿತ್ಯವೂ ನಡೆಯುವ ಕಾಯಕ. ಇದು ಹೀಗೆಯೇ ನಡೆದರೆ ಸ್ವಚ್ಛ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ಗಣರಾಜ್ಯೋತ್ಸವ ಮುನ್ನಾ ದಿನ ಶನಿವಾರ ಗ್ರಾಮ ಪಂಚಾಯಿತಿ ಮತ್ತು ತರಳಬಾಳು ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳು, ನೌಕರರು, ಗ್ರಾಮಸ್ಥರು ಕೈಗೊಂಡಿದ್ದ ಗ್ರಾಮ ಸ್ವಚ್ಛತೆ ಕಾರ್ಯ ವೀಕ್ಷಿಸಿ ಮಾತನಾಡಿದರು.

    ಗ್ರಾಪಂ ಪಿಡಿಒ ಬಿ.ಲೋಕೇಶ್ ಇತರರು ಉಪಸ್ಥಿತರಿದ್ದರು. ಗ್ರಾಮದ ಶಾಲಾ-ಕಾಲೇಜು, ದೇವಸ್ಥಾನ, ಬಸ್ ನಿಲ್ದಾಣ, ಆಸ್ಪತ್ರೆ ಮುಂತಾದ ಸ್ಥಳಗಳನ್ನು ಶುಚಿಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts