ಶಿರಹಟ್ಟಿ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಕಳವು

blank

ಶಿರಹಟ್ಟಿ: ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಸೋಮವಾರ ರೈತರ ರೇಷ್ಮೆಗೂಡು ಕಳ್ಳತನವಾಗಿದ್ದು, ಆಕ್ರೋಶಗೊಂಡ ರೈತರು ಸೋಮವಾರ ಮಾರುಕಟ್ಟೆ ಮುಂದೆ ಪ್ರತಿಭಟನೆ ನಡೆಸಿ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಖರೀದಿದಾರರ ಅಕ್ರಮ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯ ವಿವರ: ಲಕ್ಷ್ಮೇಶ್ವರ ತಾಲೂಕಿನ ರೈತ ಬೀರಪ್ಪ ಪೂಜಾರ ಅವರು ರೇಷ್ಮೆಗೂಡು ಮಾರಾಟ ಮಾಡಲು ಮಾರುಕಟ್ಟೆಗೆ ಬಂದಿದ್ದರು. ಅವರು ಚಹಾ ಕುಡಿಯಲು ಹೋದಾಗ, ಅವರ ರೇಷ್ಮೆಗೂಡನ್ನು ಖರೀದಿದಾರರೊಬ್ಬರು ಕದ್ದೊಯ್ದರು. ರೈತರು ಗಮನಿಸಿದಾಗ, ಕಳ್ಳ ಗೂಡುಗಳನ್ನು ಚೆಲ್ಲಿ ಪರಾರಿಯಾಗಿದ್ದಾನೆ.

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಮಾರುಕಟ್ಟೆಯಲ್ಲಿ ರೈತರ ಗೂಡು ಕಳ್ಳತನವಾಗುವುದು ಹೊಸ ವಿಷಯವಲ್ಲ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಾರುಕಟ್ಟೆಯ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಕಳ್ಳತನ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಧಿಕಾರಿಗಳ ಭೇಟಿ: ಜಿಲ್ಲಾ ರೇಷ್ಮೆ ಉಪ ನಿರ್ದೇಶಕ ಶ್ರೀಶೈಲ ಮೂರ್ತಿ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು. ಕಳ್ಳತನದಲ್ಲಿ ಭಾಗಿಯಾದ ಖರೀದಿದಾರರ ಪರವಾನಗಿ ರದ್ದುಪಡಿಸಿ, ಮಾರುಕಟ್ಟೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಎಚ್.ಎಂ. ದೇವಗಿರಿ, ಸಂತೋಷ ಕುರಿ, ಗೂಳಪ್ಪ ಕರಿಗಾರ, ಈರಣ್ಣ ಕಲ್ಯಾಣಿ, ಅನಂತಸ್ವಾಮಿ, ಫಕೀರೇಶ ಮುರಾರಿ, ನಾಗೇಶರಾವ್ ಇಂಗಳಗಿ, ಶಿವನಗೌಡ ಪಾಟೀಲ, ಚಂದ್ರು ಜಿಡಗಣ್ಣವರ ಇತರರಿದ್ದರು.

ಕೇಂದ್ರದಲ್ಲಿ ಕೋಳಿ ಸಾಕಾಣಿಕೆ

ರೇಷ್ಮೆ ಮಾರುಕಟ್ಟೆಯಲ್ಲಿ ಈಗ ಕೋಳಿ ಸಾಕಾಣಿಕೆ ಸಹ ನಡೆಯುತ್ತಿದ್ದು, ಇದರಿಂದ ಮಾರುಕಟ್ಟೆಯ ಮೂಲ ಉದ್ದೇಶ ಹಾಳಾಗುತ್ತಿದೆ. ಈ ಅನಧಿಕೃತ ಚಟುವಟಿಕೆಗಳು ಅಧಿಕಾರಿಗಳ ಬೆಂಬಲದಿಂದಲೇ ನಡೆಯುತ್ತಿವೆ ಎಂದು ರೈತರು ಆರೋಪಿಸಿದರು. ಉತ್ತರ ಕರ್ನಾಟಕದ ಪ್ರಮುಖ ರೇಷ್ಮೆ ಮಾರುಕಟ್ಟೆ ಹಾಳಾಗುತ್ತಿರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ಜಂಟಿ ನಿರ್ದೇಶಕರಿಗೆ ಮನವಿ

ರೇಷ್ಮೆ ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಜಗದ್ಗುರು ಫಕೀರ ಸಿದ್ಧರಾಮೇಶ್ವರ ರೇಷ್ಮೆ ಬೆಳೆಗಾರರ ಕ್ವಾಲಿಟಿ ಕ್ಲಬ್ ವತಿಯಿಂದ ಬೆಳಗಾವಿ ವೃತ್ತ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಎಸ್.ಎಂ. ಕೋರಿ ಅವರಿಗೆ ರೇಷ್ಮೆ ಮಾರುಕಟ್ಟೆಯಲ್ಲಿ ಮಂಗಳವಾರ ಮನವಿ ಸಲ್ಲಿಸಲಾಯಿತು.

ರೀಲರ್​ಗಳು ತಮ್ಮ ಲೈಸೆನ್ಸ್​ಗಳನ್ನು ನವೀಕರಿಸದೆ ಗೂಡು ಖರೀದಿ ಮಾಡುತ್ತಿದ್ದಾರೆ. ಅನೇಕ ಬಾರಿ ರೇಷ್ಮೆ ಗೂಡು ಕಳವು ಆಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಸ್ತುತ ರೀಲಿಂಗ್ ಶೆಡ್​ನಲ್ಲಿ ಕೋಳಿ ಸಾಕಾಣಿಕೆ ನಡೆಯುತ್ತಿದ್ದು, ಅದಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಮಾರುಕಟ್ಟೆ ಅಧಿಕಾರಿ ಪಿ.ಎಚ್. ಹಳಿಯಾಳ ಮತ್ತು ರೀಲಿಂಗ್ ಅಧಿಕಾರಿ ಪ್ರಕಾಶ ಸಾಯ್ರಾಣಿಯವರನ್ನು ಸೇವೆಯಿಂದ ಅಮಾನತು ಮಾಡಬೇಕು. ರೈತರ ಬೇಡಿಕೆ ಈಡೇರಿಸದಿದ್ದರೆ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ತೀವ್ರಗೊಳಿಸಲಾಗುತ್ತದೆ ಎಂದು ರೈತರು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ರೈತರ ಬೇಡಿಕೆಗಳು

* ರೇಷ್ಮೆಗೂಡು ಕಳ್ಳತನ ಮಾಡಿದ ಖರೀದಿದಾರರ ಪರವಾನಗಿ ರದ್ದುಪಡಿಸಬೇಕು.

* ಮಾರುಕಟ್ಟೆ ಅಧಿಕಾರಿ ಹಳ್ಯಾಳ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು.

* ಮಾರುಕಟ್ಟೆಯಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ದುರಸ್ತಿಗೊಳಿಸಬೇಕು.

ಖರೀದಿದಾರರ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕು.

blank

 

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…