ಉಣಕಲ್ಲ ಸಿದ್ದಪ್ಪಜ್ಜನ ಜಾತ್ರೋತ್ಸವ

blank

ಹುಬ್ಬಳ್ಳಿ: ತಾಲೂಕಿನ ಉಣಕಲ್ಲ ಹಠಯೋಗಿ ಸದ್ಗುರು ಸಿದ್ದಪ್ಪಜ್ಜನವರ ಮೂಲ ಗದ್ದುಗೆ ಮಠದಲ್ಲಿ ಜ. 16ರಿಂದ 21ರ ವರೆಗೆ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

blank

ಸದ್ಗುರು ಸಿದ್ದಪ್ಪಜನವರ ಕುರಿತು ಹಾವೇರಿ ಜಿಲ್ಲೆಯ ಅಗಡಿಯ ಡಾ. ಗುರುಲಿಂಗ ಸ್ವಾಮಿ ಅಕ್ಕಿಮಠ ಇವರಿಂದ ನಿತ್ಯ ಸಂಜೆ 7ಕ್ಕೆ ಪ್ರವಚನ ನಡೆಯಲಿದೆ. ಬೆಂಗಳೂರಿನ ಅಮರೇಶ್ವರ ಗವಾಯಿಗಳಿಂದ ಕೀರ್ತನೆ ಹಾಗೂ ಹನುಮಂತರಾಯರು ತಬಲಾ ಸಾಥ್ ನೀಡಲಿದ್ದಾರೆ.

ಜ. 20ರಂದು ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸದ್ಗುರು ಚಿದ್ರೂಪಾನಂದ ಸ್ವಾಮೀಜಿ ಪ್ರವಚನ ನೀಡುವರು.
ಜ. 21ರಂದು ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಪ್ರವಚನ ನೀಡುವರು. ರಾಯನಾಳದ ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ ನೇತೃತ್ವ ವಹಿಸುತ್ತಾರೆ.

ಉಣಕಲ್ಲಿನ ವಿವಿಧ ಭಜನಾ ಮಂಡಳಿಗಳು ನಿತ್ಯ ಭಜನೆ ಮಾಡುವರು. ಪ್ರವಚನ ನಂತರ ಅನ್ನಸಂತರ್ಪಣೆ ಇರುತ್ತದೆ.

ಜ. 22ರಂದು ಬೆಳಗ್ಗೆ ರಾಭಿಷೇಕ ಹಾಗೂ ಹೂವಿನ ಅಲಂಕಾರ ಸದ್ಗುರು ಸಿದ್ಧೇಶ್ವರ ಸೇವಾ ಸಮಿತಿ ಇವರಿಂದ ನೆರವೇರಲಿದೆ. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಂತರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 5ಕ್ಕೆ ರಥೋತ್ಸವವು ಜರುಗುವದು ಎಂದು ಶ್ರೀಮಠದ ಚೇರ್ಮನ್ ಶಿವು ಪಾಟೀಲ ತಿಳಿಸಿದ್ದಾರೆ.

Share This Article

ತಂದೆಯಾಗಿ ನಿಮ್ಮ ಮಗನಿಗೆ ಕಲಿಸಲೇ ಬೇಕಾದ ವಿಷಯಗಳಿವು…| Dad

Dad: ಈಗಿನ ದಿನಗಳಲ್ಲಿ ಮಕ್ಕಳನ್ನು ಬೆಳೆಸುವುದು ದೊಡ್ಡ ಸವಾಲಾಗಿದೆ. ತಮ್ಮ ಮಕ್ಕಳಿಗೆ ಶಿಕ್ಷಣ, ಶಿಸ್ತು ಮತ್ತು…

ದೇಹದ ಈ ಭಾಗಗಳ ಮೇಲೆ ಅಪ್ಪಿತಪ್ಪಿಯೂ ಟ್ಯಾಟೂ ಹಾಕಿಸಬೇಡಿ..ಅಪಾಯ ಖಂಡಿತ! Tattoo

Tattoo: ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್  ಆಗಿದೆ. ಹುಡುಗರಿಂದ ಹಿಡಿದು ಹುಡುಗಿಯರವರೆಗೆ ಎಲ್ಲರೂ ತಮ್ಮ…

ಕಂಕುಳಲ್ಲಿರುವ ಕಪ್ಪು ಕಲೆ ಕಡಿಮೆಯಾಗಲು ಏನು ಮಾಡಬೇಕು? underarms

underarms: ಅನೇಕ ಹುಡುಗಿಯರು ಕಂಕುಳಲ್ಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು  ಅನೇಕ ಪ್ರಯತ್ನ ಮಾಡುತ್ತಾರೆ. ಇದಕ್ಕಾಗಿ ಅವರು…