ಹುಬ್ಬಳ್ಳಿ: ತಾಲೂಕಿನ ಉಣಕಲ್ಲ ಹಠಯೋಗಿ ಸದ್ಗುರು ಸಿದ್ದಪ್ಪಜ್ಜನವರ ಮೂಲ ಗದ್ದುಗೆ ಮಠದಲ್ಲಿ ಜ. 16ರಿಂದ 21ರ ವರೆಗೆ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸದ್ಗುರು ಸಿದ್ದಪ್ಪಜನವರ ಕುರಿತು ಹಾವೇರಿ ಜಿಲ್ಲೆಯ ಅಗಡಿಯ ಡಾ. ಗುರುಲಿಂಗ ಸ್ವಾಮಿ ಅಕ್ಕಿಮಠ ಇವರಿಂದ ನಿತ್ಯ ಸಂಜೆ 7ಕ್ಕೆ ಪ್ರವಚನ ನಡೆಯಲಿದೆ. ಬೆಂಗಳೂರಿನ ಅಮರೇಶ್ವರ ಗವಾಯಿಗಳಿಂದ ಕೀರ್ತನೆ ಹಾಗೂ ಹನುಮಂತರಾಯರು ತಬಲಾ ಸಾಥ್ ನೀಡಲಿದ್ದಾರೆ.
ಜ. 20ರಂದು ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸದ್ಗುರು ಚಿದ್ರೂಪಾನಂದ ಸ್ವಾಮೀಜಿ ಪ್ರವಚನ ನೀಡುವರು.
ಜ. 21ರಂದು ರುದ್ರಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಪ್ರವಚನ ನೀಡುವರು. ರಾಯನಾಳದ ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ ನೇತೃತ್ವ ವಹಿಸುತ್ತಾರೆ.
ಉಣಕಲ್ಲಿನ ವಿವಿಧ ಭಜನಾ ಮಂಡಳಿಗಳು ನಿತ್ಯ ಭಜನೆ ಮಾಡುವರು. ಪ್ರವಚನ ನಂತರ ಅನ್ನಸಂತರ್ಪಣೆ ಇರುತ್ತದೆ.
ಜ. 22ರಂದು ಬೆಳಗ್ಗೆ ರಾಭಿಷೇಕ ಹಾಗೂ ಹೂವಿನ ಅಲಂಕಾರ ಸದ್ಗುರು ಸಿದ್ಧೇಶ್ವರ ಸೇವಾ ಸಮಿತಿ ಇವರಿಂದ ನೆರವೇರಲಿದೆ. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಂತರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 5ಕ್ಕೆ ರಥೋತ್ಸವವು ಜರುಗುವದು ಎಂದು ಶ್ರೀಮಠದ ಚೇರ್ಮನ್ ಶಿವು ಪಾಟೀಲ ತಿಳಿಸಿದ್ದಾರೆ.