ಕಾಲುವೆಗೆ ಬಿದ್ದಿದ್ದ ಕಾರು, ಒಂದು ದಿನದ ಬಳಿಕ ಪತ್ತೆ! ಬಾಗಿಲು ತೆರೆದವರಿಗೆ ಕಾದಿತ್ತು ಶಾಕ್​

ಸಿದ್ದಾಪುರ(ಉತ್ತರ ಕನ್ನಡ): ಜಲಪಾತ ಕಣ್ತುಂಬಿಕೊಂಡ ಖುಷಿಯಲ್ಲಿ ಮನೆಗೆ ವಾಪಸ್​ ಬರುತ್ತಿದ್ದ ಮೂವರು ಮಾರ್ಗಮಧ್ಯೆ ಜಲಸಮಾಧಿಯಾದ ಘಟನೆ ಹೆಗ್ಗರಣಿ ಗ್ರಾಪಂ ವ್ಯಾಪ್ತಿಯ ಕೋಡನಮನೆ ಸಮೀಪ ಸಂಭವಿಸಿದೆ. ಬುಧವಾರ ಮಧ್ಯಾಹ್ನ ಭಾರಿ ಮಳೆ ಸುರಿಯುತ್ತಿತ್ತು. ಈ ಸಂದರ್ಭದಲ್ಲಿ ಶಿರಸಿ – ಸಿದ್ದಾಪುರ ನಡುವೆಯ ಕೊಡನಮನೆ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ. ಕೋಡನಮನೆ ಸೇತುವೆಯಿಂದ ಸುಮಾರು 300 ಮೀಟರ್ ಆಚೆ ಕಾರು ನೀರಿನೊಳಗೆ ಮುಳುಗಿರುವುದನ್ನು ಗುರುವಾರ ಮಧ್ಯಾಹ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಕಾಲುವೆಗೆ ಬಿದ್ದ ಒಂದು ದಿನದ ಬಳಿಕ … Continue reading ಕಾಲುವೆಗೆ ಬಿದ್ದಿದ್ದ ಕಾರು, ಒಂದು ದಿನದ ಬಳಿಕ ಪತ್ತೆ! ಬಾಗಿಲು ತೆರೆದವರಿಗೆ ಕಾದಿತ್ತು ಶಾಕ್​