ಚಿತ್ರ: ವಿಷ್ಣುಪ್ರಿಯ
ನಿರ್ದೇಶನ: ವಿ.ಕೆ. ಪ್ರಕಾಶ್
ನಿರ್ಮಾಣ: ಕೆ.ಮಂಜು
ತಾರಾಗಣ: ಶ್ರೇಯಸ್ ಮಂಜು, ಪ್ರಿಯಾ ವಾರಿಯರ್, ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್, ನಿಹಾಲ್ ಮತ್ತಿತರರು.
| ಹರ್ಷವರ್ಧನ್ ಬ್ಯಾಡನೂರು
“ಈ ಪ್ರೀತಿನೇ ಹಿಂಗೆ ಪ್ರಿಯ… ನೀನ್ ಸಿಗೋಕೂ ಮುಂಚೆ ಸಿಂಹದ ಥರಾ ಓಡಾಡಿಕೊಂಡಿದ್ದೆ. ಆದ್ರೆ, ನೀನು ಐ ಲವ್ ಯೂ ಅಂತ ಹೇಳಿದ್ ಮೇಲೆ, ನನ್ ಹೃದಯ ಮುದ್ರುಕೊಂಡು ಮೊಲದ ಮರಿ ಥರಾ ಆಗೋಯ್ತು. ಈ ಪ್ರೀತಿ ಗೆಲ್ಸುತ್ತೆ, ಅಳ್ಸುತ್ತೆ, ಸೋಲ್ಸುತ್ತೆ, ಸಾಯ್ಸುತ್ತೆ…’ ಅಂತ ಪ್ರಿಯ ಮುಂದೆ ಕಣ್ಣೀರು ಹಾಕುತ್ತಾನೆ ವಿಷ್ಣು (ಶ್ರೇಯಸ್). ಮಲೆನಾಡಿನ ಮಡಿಲಲ್ಲಿ ನಡೆಯುವ 90ರ ದಶಕದ ಭಾವತೀವ್ರ ಪ್ರೇಮಕಥೆ “ವಿಷ್ಣುಪ್ರಿಯ’.
ಗೆಳೆಯ ಬಾಲು (ನಿಹಾಲ್) ಪ್ರೀತಿಸುತ್ತಿದ್ದ ಹುಡುಗಿ ಪ್ರಿಯಾ. ಗೆಳೆಯನ ಪರ ಮಾತನಾಡಲು ಹೋಗುವ ವಿಷ್ಣುಗೆ, ಪ್ರಿಯ ಈತನನ್ನೇ ಪ್ರೀತಿಸುತ್ತಿರುವುದು ತಿಳಿಯುತ್ತದೆ. ಕಾಲೇಜು ಹುಡುಗನ ಹುಚ್ಚುಕೋಡಿ ಮನಸ್ಸಿನ ತುಂಬ ಪ್ರಿಯ ತುಂಬಿಕೊಂಡುಬಿಡುತ್ತಾಳೆ. ವಿಷ್ಣು&ಪ್ರಿಯ ವಿಷಯ ಬಾಲುಗೆ ಗೊತ್ತಾಗಿ, ಆತನೂ ಹೇಗಾದರೂ ಇಬ್ಬರನ್ನೂ ದೂರ ಮಾಡಿ, ಪ್ರಿಯಳನ್ನು ಪಡೆಯಬೇಕು ಅಂತ ನಿರ್ಧರಿಸುತ್ತಾನೆ. ಮತ್ತೊಂದೆಡೆ ಕದ್ದು&ಮುಚ್ಚಿ ಭೇಟಿಯಾಗುತ್ತಿದ್ದ ವಿಷ್ಣು&ಪ್ರಿಯ, ಮೊದಲು ಪೊಲೀಸರಿಗೆ ನಂತೆ ಮನೆಯವರಿಗೆ ಸಿಕ್ಕೀಬಿಳುತ್ತಾರೆ. ಮುಂದೆ? ಇಬ್ಬರೂ ಒಂದಾಗುತ್ತಾರಾ? ಇವರ ಪ್ರೀತಿಗೆ ಮನೆಯವರು ಒಪು$್ಪತ್ತಾರಾ? ತಿಳಿಯಲು ಸಿನಿಮಾ ನೋಡಿ.
ಫೆಬ್ರವರಿಯಲ್ಲೇ ನೆತ್ತಿಸುಡುವ ಬಿಸಿಲು ಶುರುವಾಗಿದೆ. ಆದರೆ, ಥಿಯೇಟರ್ ಒಳಗೆ ಮಲೆನಾಡಿದ ಹಸಿರ ಸಿರಿಯ ನಡುವೆ, ಜಿಟಿಜಿಟಿ ಮಳೆಯ ಸಿಂಚನದ ತಣ್ಣನೆಯ ಅನುಭವ ನೀಡುವ “ವಿಷ್ಣುಪ್ರಿಯ’, ಕೊನೆಗೆ ಹೃದಯಬಡಿತ ಹೆಚ್ಚಿಸಿ, ಉಸಿರು ಬಿಸಿಯಾಗಿಸಿ, ಮನಸ್ಸು ಭಾರವಾಗಿಸುತ್ತದೆ. ತೆರೆಯ ಮೇಲೆ 90ನೆಯ ದಶಕವನ್ನು ಸೃಷ್ಟಿಸುವಲ್ಲಿ ಎಡವಟ್ಟುಗಳಾಗಿವೆ. ಅತಿ ಎನಿಸುವ ಕ್ಲೋಸಪ್ ಶಾಟ್ಗಳು ಬೇಕಿತ್ತಾ ಎಂಬ ಪ್ರಶ್ನೆ ಮೂಡಿಸುತ್ತವೆ. ಚಿತ್ರದ ಮೊದರ್ಲಧ ನಿಧಾನ, ದ್ವೀತಿಯಾರ್ಧವೇ ಪ್ರಧಾನ. ನಾಯಕ ಶ್ರೇಯಸ್ ಈ ಚಿತ್ರದಲ್ಲಿ ಮತ್ತಷ್ಟು ಮಾಗಿದ್ದಾರೆ. ೈಟ್ಗಳಲ್ಲಿ ಅಬ್ಬರಿಸುವ ಅವರು, ನಟನೆಯಲ್ಲೂ ಗಮನ ಸೆಳೆಯುತ್ತಾರೆ. ಪ್ರಿಯ ನೋಡುಗರಿಗೆ ಪ್ರಿಯವಾಗುತ್ತಾರೆ. ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್, ನಿಹಾಲ್ ಸೇರಿ ಉಳಿದ ತಾರಾಗಣದವರೂ ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣದಲ್ಲಿ ಮಲೆನಾಡು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ. ಮುನಿಸು ಮರೆತು ನಿರ್ಮಾಪಕ ಕೆ. ಮಂಜು ಗಾಯಕ ಸಂಚಿತ್ ಹೆಗ್ಡೆ ಅವರಿಂದ “ಕ್ಷಣ ಕ್ಷಣ’ ಸಾಂಗ್ ಹಾಡಿಸಿದ್ದಾರೆ. ಪ್ರೀತಿಸಿದ, ಪ್ರೀತಿಸುವ ಹೃದಯಗಳಿಗೆ “ವಿಷ್ಣುಪ್ರಿಯ’ ಆಪ್ತವಾಗುವುದರಲ್ಲಿ ಸಂದೇಹವಿಲ್ಲ.