ನವದೆಹಲಿ: ಕರ್ನಾಟಕದ ರಾಜ್ಯದ ಇಬ್ಬರಿಗೆ ಶೌರ್ಯ ಪ್ರಶಸ್ತಿ ಪ್ರಕಟವಾಗಿದೆ. ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ಪ್ರಕಟಿಸಿರುವ ಪಟ್ಟಿಯಲ್ಲಿ ರಾಜ್ಯದ ಇಬ್ಬರು ಸ್ಥಾನ ಪಡೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ 9 ವರ್ಷದ ಆರತಿ ಕಿರಣ್ ಶೇಟ್ ಮತ್ತು ರಾಯಚೂರಿನ 11 ವರ್ಷದ ವೆಂಕಟೇಶ್ಗೆ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದವರು.
ಕೋಪೋದ್ರಿಕ್ತ ಹಸುವಿನ ದಾಳಿಯಿಂದ ತನ್ನ ಸಹೋದರನ ಪ್ರಾಣವನ್ನು ಆರತಿ ಕಾಪಾಡಿದ್ದಳು. ಆರತಿ ಸಮಯೋಚಿತ ನಡೆಯಿಂದಾಗಿ ಆಕೆಯ ತಮ್ಮನಿಗೆ ಪುನರ್ಜನ್ಮ ಸಿಕ್ಕಿತ್ತು.
ಪ್ರವಾಹದ ನೀರಿನಲ್ಲಿ ಈಜಿ ಆಂಬುಲೆನ್ಸ್ಗೆ ದಾರಿ
2019ರಲ್ಲಿ ಕೃಷ್ಣಾ ನದಿಯ ಭೀಕರ ಪ್ರವಾಹ ಬಂದಾಗ ಶೌರ್ಯ ತೋರಿದ್ದ ವೆಂಕಟೇಶ್. ಆಗಸ್ಟ್ 10ರಂದು ನೀರಿನಿಂದ ಮುಳುಗಿದ್ದ ರಸ್ತೆಯಲ್ಲಿ ಈಜಿ ಆಂಬುಲೆನ್ಸ್ಗೆ ದಾರಿ ತೋರಿಸಿದ್ದ ವೆಂಕಟೇಶ್. ಆ ಮೂಲಕ ಆಂಬುಲೆನ್ಸ್ ನಲ್ಲಿದ್ದ ಐವರ ಪ್ರಾಣ ಕಾಪಾಡಿದ್ದ ವೆಂಕಟೇಶ್ಗೆ ಶೌರ್ಯ ಪ್ರಶಸ್ತಿ ದೊರೆತಿದೆ.
ಒಟ್ಟು 22 ಮಕ್ಕಳಿಗೆ ಶೌರ್ಯ ಪ್ರಶಸ್ತಿ ಘೋಷಿಸಿದ್ದು, ರಾಜ್ಯದ ವೆಂಕಟೇಶ್ ಮತ್ತು ಆರತಿ ಇಬ್ಬರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಜನವರಿ 26ರಂದು ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗಿಯಾಗಲಿರುವ ಈ ಇಬ್ಬರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.