ಪ್ರಬಲ ‘ಆಕಾಶ್​’ಗೆ ತಾಂತ್ರಿಕ ಕೊಡುಗೆ…

Akash Lead

ರಾಡರ್​ ತಯಾರಿಕೆಯಲ್ಲಿ ಕರಾವಳಿಯ ಮಹಿಳೆ

ಸ್ವದೇಶಿ ನಿರ್ಮಾಣಕ್ಕೆ ಬಲ ನೀಡಿದ್ದ ಕನ್ನಡತಿ ಶಾಂತಾ

ಪ್ರಶಾಂತ ಭಾಗ್ವತ, ಉಡುಪಿ
ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಪರಾಕ್ರಮ ಮೆರೆದ ಭಾರತೀಯ ಸೇನೆಯ ಆಪರೇಷನ್​ ಸಿಂಧೂರ ಕಾರ್ಯಾಚರಣೆಯು ದೇಶವಾಸಿಗರಿಗೆ ಇನ್ನೂ ರೋಮಾಂಚನ ಮೂಡಿಸುತ್ತಿದೆ. ಬ್ರಹ್ಮೋಸ್​, ಸುದರ್ಶನ ಚಕ್ರ (ಎಸ್​-400) ಹಾಗೂ ಆಕಾಶ್​ ಕ್ಷಿಪಣಿಗಳು ತನ್ನ ಸಾಮರ್ಥ್ಯ ಏನೆಂಬುದನ್ನು ವಿಶ್ವಕ್ಕೆ ತೋರ್ಪಡಿಸಿವೆ.

blank

Akash 2ಭಾರತದ ಮೇಲೆ ಶತ್ರು ಪಾಕಿಸ್ತಾನ ಹಾರಿಸಿಬಿಟ್ಟಿದ್ದ ನೂರಾರು ಅಪಾಯಕಾರಿ ಡ್ರೋಣ್​ಗಳನ್ನು ಸ್ವದೇಶಿ ನಿರ್ಮಿತ ಆಕಾಶ್​ ಕ್ಷಿಪಣಿ ರ್ನಿದಿಷ್ಟ ಗುರಿಯೊಂದಿಗೆ ಶೇ.90ರಷ್ಟನ್ನು ಹೊಡೆದುರುಳಿಸಿತ್ತು. ಅಂತಹ ಪ್ರಬಲ ಆಕಾಶ್​ ನಿರ್ಮಾಣದಲ್ಲಿ ಕರಾವಳಿ ಭಾಗದ ಉಡುಪಿಯ ಮಹಿಳೆ, ಕನ್ನಡತಿ ಶಾಂತಾ ನಾಯಕ ಅವರೂ ಸಹ ಮಹತ್ವದ ಕೊಡುಗೆ ನೀಡಿದ್ದರು.

ಸಬ್​ ಸಿಸ್ಟಮ್​ ಜತೆಗೆ ಸಂಪರ್ಕ

Akash 4ಕ್ಷಿಪಣಿಗಳನ್ನು ನಭಕ್ಕೆ ಹಾರಿಸುವ ರಾಜೇಂದ್ರ ಹೆಸರಿನ ರಾಡರ್​ನ ಸಬ್​ ಸಿಸ್ಟಮ್​ (ಉಪವ್ಯವಸ್ಥೆ)ನಲ್ಲಿ ಶಾಂತಾ ಕಾರ್ಯ ನಿರ್ವಹಿಸಿದ್ದರು. ರಾಡರ್​ ನಿರ್ಮಾಣದ ಡಿಸೈನ್​ ವರ್ಕ್​, ಟೆಸ್ಟಿಂಗ್​, ಅಭಿವೃದ್ಧಿ ಪಡಿಸಿದ ಬಳಿಕ ಪರೀಕ್ಷಿಸಿ ಮುಖ್ಯ ರಾಡರ್​ನ ಇನ್ನಿತರ ಸಿಸ್ಟಮ್​ ಜತೆಗೆ ಸಂಪರ್ಕ ಮಾಡುವ ತಾಂತ್ರಿಕ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು.

ಕನ್ನಡಿಗರಿಗೂ ಹೆಮ್ಮೆ

Akash 5ಆಕಾಶ್​ ಏರ್​ ಡಿಫೆನ್ಸ್​ ಸಿಸ್ಟಮ್​, ರಾಜೇಂದ್ರ ರಾಡರ್​ ಮತ್ತು 3ಡಿ ಸಿಎಆರ್​ (ಕೇಂದ್ರ ಸ್ವಾಮ್ಯದ ರಾಡರ್​)ಗಳನ್ನು 1990-2000ನೇ ವರ್ಷದಲ್ಲಿ ಅಭಿವೃದ್ಧಿ ಪಡಿಸಿ ಸೇನೆಗೆ ಹಸ್ತಾಂತರಿಸಲಾಗಿತ್ತು. ಈ ಕಾರ್ಯದಲ್ಲಿ ಉಡುಪಿಯ ಆರ್​ಎಸ್​ಬಿ ಸಮಾಜದ ಶಾಂತಾ ಅವರೂ ಸಹ ಅಮೂಲ್ಯ ಸೇವೆ ಸಲ್ಲಿಸಿರುವುದು ಕನ್ನಡಿಗರಿಗೂ ಹೆಮ್ಮೆ ತಂದಿದೆ. 1987ರಲ್ಲಿ ತಾಂತ್ರಿಕ ಅಧಿಕಾರಿಯಾಗಿ ಉದ್ಯೋಗಕ್ಕೆ ಸೇರಿದ್ದ ಅವರು, 2022ರಲ್ಲಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಡಾ. ಎಪಿಜೆ ಅಬ್ದುಲ್​ ಕಲಾಂ ಜತೆ ಕಾರ್ಯ

Akash 3ಕೇಂದ್ರ ರಕ್ಷಣಾ ಇಲಾಖೆಯ ಡಿಫೆನ್ಸ್​ ರಿಸರ್ಚ್​ ಆ್ಯಂಡ್​ ಡೆವೆಲೆಪ್​ಮೆಂಟ್​ ಒರ್ಗಾನೈಜೇಷನ್​ (ಡಿಆರ್​ಡಿಒ)ನ ಅಡಿಯಲ್ಲಿ ಇಲೆಕ್ಟ್ರಾನಿಕ್​ ಆ್ಯಂಡ್​ ರಾಡರ್​ ಡೆವೆಲಪ್​ಮೆಂಟ್​ ಸಂಸ್ಥೆ (ಆರ್​ಡಿಇ)ಯಲ್ಲಿ ಆಕಾಶ್​ ಕ್ಷಿಪಣಿಗೆ ಸಂಬಂಧಿಸಿದ ರಾಡರ್​ ನಿರ್ಮಿಸುವ ಯೋಜನೆ ಆರಂಭಗೊಂಡಿತ್ತು. ಡಾ. ಎಪಿಜೆ ಅಬ್ದುಲ್​ ಕಲಾಂ ಪ್ರಮುಖ ಯೋಜನಾಧಿಕಾರಿಯಾಗಿದ್ದರು. ಹಲವಾರು ವಿಜ್ಞಾನಿಗಳು, ತಂತ್ರಜ್ಞರು ಸೇವೆ ನೀಡಿದ್ದು, ಶಾಂತಾ ಅವರೂ ಸಹ ಓರ್ವ ತಾಂತ್ರಿಕ ಅಧಿಕಾರಿಯಾಗಿದ್ದರು. ಡಾ. ಕಲಾಂ ಬಳಿಕ ಕನ್ನಡಿಗರೇ ಆದ ಬೆಂಗಳೂರಿನ ವಿಜ್ಞಾನಿ ಡಾ. ಪ್ರಲ್ಹಾದ ಆರ್​. ರಾವ್​ ಅವರು ಯೋಜನಾ ನಿರ್ದೇಶಕರಾಗಿ ಮುಂದುವರಿದರು. ಈ ವೇಳೆಯಲ್ಲೂ ಸಹ ಶಾಂತಾ ಅತ್ಯುತ್ತಮವಾಗಿ ತಾಂತ್ರಿಕ ಕಾರ್ಯ ನಿರ್ವಹಿಸಿದ್ದರು. ಅವರ ಕಾರ್ಯ ಗುರುತಿಸಿ ಡಿಆರ್​ಡಿಒ ಹಲವಾರು ಪ್ರಶಸ್ತಿ ನೀಡಿ ಅಭಿನಂದಿಸಿದೆ.

ಭಾರತ ನಿರ್ಮಿತ 3ಡಿ ಕಾರ್​ ಹಾಗೂ ರಾಜೇಂದ್ರ ರಾಡರ್​ಗಳು ಶತ್ರು ದೇಶಗಳಿಂದ ಬರುವ ಡ್ರೋಣ್​, ಮಿಸೈಲ್​ ರಾಕೆಟ್​ ಮುಂತಾದ ವಿದೇಶಿ ಅಸ್ತ್ರ ಗುರುತಿಸಿ, ಅವುಗಳನ್ನು ಟ್ರ್ಯಾಕ್​ ಮಾಡಿ ನಾಶಪಡಿಸುವ ಶಕ್ತಿ ಹೊಂದಿದೆ. ಗಣರಾಜ್ಯೋತ್ಸವದ ಪರೇಡ್​ನಲ್ಲಷ್ಟೇ ದೇಶದ ಜನರು ಆಕಾಶ್​ ಕ್ಷಿಪಣಿ ನೋಡುತ್ತಿದ್ದರು. ಆದರೆ, ಆಪರೇಷನ್​ ಸಿಂಧೂರದಲ್ಲಿ ಆಕಾಶ್​ನ ಅತ್ಯದ್ಭುತ ಸಾಮರ್ಥ್ಯ ತಿಳಿಯಿತು. ಶತ್ರುಗಳ ನೂರಾರು ಡ್ರೋಣ್​ ಹಾಗೂ ಕ್ಷಿಪಣಿಯನ್ನು ಧ್ವಂಸ ಮಾಡಿರುವುದು ತುಂಬ ತೃಪ್ತಿಯಾಯಿತು. ನಾನೂ ಸಹ ಈ ರಾಡರ್​ ಹಾಗೂ ಆಕಾಶ್​ ನಿರ್ಮಾಣದಲ್ಲಿ ಅಳಿಲು ಸೇವೆ ಸಲ್ಲಿಸಿದ್ದರಿಂದ ಈಗ ಅತ್ಯಂತ ಹೆಮ್ಮೆ ಆಗುತ್ತಿದೆ.
|ಶಾಂತಾ ನಾಯಕ. ನಿವೃತ್ತ ತಾಂತ್ರಿಕ ಅಧಿಕಾರಿ, ಆರ್​ಡಿಇ

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank