ಶಾಮಿಯಾನ ಪೈಪ್ ಬಿದ್ದು ಸ್ಥಳದಲ್ಲೇ ಮೃತ

blank

ಬೇಲೂರು: ಪಟ್ಟಣದ ಅಂತರಘಟ್ಟಮ್ಮ ದೇವಾಲಯದ ಆವರಣದಲ್ಲಿ ದೇವರ ಜಾತ್ರಾ ಮಹೋತ್ಸವದಲ್ಲಿ ದಾಸೋಹ ವ್ಯವಸ್ಥೆಗೆ ಸಿದ್ಧತೆ ಕೈಗೊಳ್ಳುತ್ತಿದ್ದ ಸಂದರ್ಭ ಶಾಮಿಯಾನದ ಪೈಪ್ ತಲೆ ಮೇಲೆ ಬಿದ್ದಿದ್ದರಿಂದ ವ್ಯಕ್ತಿಯೊಬ್ಬರು ಮಂಗಳವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

blank

ರಾಯಾಪುರ ಗ್ರಾಮದ 65 ವರ್ಷದ ನಂಜೇಗೌಡ(ನಂಜುಂಡಣ್ಣ) ಮೃತಪಟ್ಟವರು.

ರಾಯಪುರ ಗ್ರಾಮ ದೇವತೆ ಅಂತರಘಟ್ಟಮ್ಮನವರ ಕೊಂಡೋತ್ಸವ ಹಾಗೂ ಸಿಡಿ ಮಹೋತ್ಸವ ಅಂಗವಾಗಿ ನಂಜೇಗೌಡ(ನಂಜುಂಡಣ್ಣ) ಮತ್ತಿತರರು ಅಂತರಘಟ್ಟಮ್ಮ ದೇಗುಲದ ಆವರಣದಲ್ಲಿ ಸಿದ್ಧತೆಯಲ್ಲಿ ತೊಡಗಿದ್ದರು. ಈ ನಡುವೆ ನಂಜುಂಡೇಗೌಡರು ಜಾತ್ರೆಗೆ ಬರುವ ಭಕ್ತರ ಅನುಕೂಲಕ್ಕಾಗಿ ಮಧ್ಯಾಹ್ನದ ದಾಸೋಹ ವ್ಯವಸ್ಥಿತವಾಗಿ ನಡೆಯಬೇಕೆಂದು ಚಿಂತಿಸಿ ಸ್ವತ: ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದರು. ಈ ಸಮಯದಲ್ಲಿ ಸಾಮಗ್ರಿಗಳನ್ನು ತುಂಬಿಕೊಂಡು ಬಂದ ಟ್ರಾೃಕ್ಟರ್‌ನ ಟ್ರಾೃಲಿ ಹಿಂಬದಿಯಿಂದ ಶಾಮಿಯಾನದ ಪೈಪ್‌ಗೆ ಗುದ್ದಿದೆ. ಈ ಸಂದರ್ಭ ಕಬ್ಬಿಣದ ಪೈಪು ನಂಜೇಗೌಡರ(ನಂಜುಂಡಣ್ಣ)ರ ತಲೆಮೇಲೆ ಬಿದ್ದಿದ್ದು, ಪರಿಣಾಮ ಅವರು ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ.
ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಸಂಜೆ ನೆರವೇರಿತು. ಘಟನೆ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸೂತಕ ಮನೆಯಂತಾದ ರಾಯಾಪುರ: ಅಂತರಘಟ್ಟಮ್ಮನವರ ಜಾತ್ರಾ ಮಹೋತ್ಸವ ಪೂರ್ವಿಕರ ಕಾಲದಿಂದಲೂ ನಡೆಯುತ್ತಿದೆ. ಕಸಬಾ ಹೋಬಳಿಯ ಸಾವಿರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸುವುದಲ್ಲದೆ ಕೊಂಡ ಹಾಯುತ್ತಾರೆ. ದೇವರಿಗೆ ರಾಯಾಪುರ ಗ್ರಾಮಸ್ಥರಿಂದಲೇ ಪ್ರಥಮ ಪೂಜೆ ಸಲ್ಲಿಕೆಯಾಗಬೇಕಿತ್ತು. ಆದರೆ ಮಂಗಳವಾರ ನಡೆದ ಕಹಿ ಘಟನೆಯಿಂದ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಕೊಂಡೋತ್ಸವದಲ್ಲಿ ಯಾರೂ ಭಾಗವಹಿಸದೆ ದುಖಿತರಾಗಿದ್ದಾರೆ.

 

 

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…