ಶೇಕ್ಸ್​ಪೀಯರ್​ ಮಹಾನ್​ ನಾಟಕಕಾರ

ವಿಜಯಪುರ: ಶೇಕ್ಸ್​ಪೀಯರ್​ರ ಸಾಹಿತ್ಯ ಮತ್ತು ಸಂಸತಿ ಮೇಲೆ ಶಾಶ್ವತ ಪ್ರಭಾವ ಬೀರುತ್ತವೆ. ಅವುಗಳಲ್ಲಿ ಮಾನವ ಸ್ವಭಾವದ ಭವ್ಯತೆ ಮತ್ತು ಕತ್ತಲೆ ಎರಡನ್ನೂ ಪ್ರದರ್ಶಿಸುತ್ತವೆ ಎಂದು ಪ್ರಸಿದ್ಧ ಇಂಗ್ಲಿಷ್​ ನಿವೃತ್ತ ಪ್ರಾಧ್ಯಾಪಕ, ಬರಹಗಾರ ಡಾ. ಆರ್​.ಕೆ. ಕುಲಕರ್ಣಿ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಎಸ್​ಬಿ ಕಲಾ ಮತ್ತು ಕೆಸಿಪಿ ವಿಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ಸ್ನಾತಕೋತ್ತರ ಇಂಗ್ಲಿಷ್​ ವಿಭಾಗದಿಂದ ಬುಧವಾರ ಹಮ್ಮಿಕೊಂಡಿದ್ದ “ಶೇಕ್ಸ್​ಪೀಯರ್​ ಮತ್ತು ಅವರ ದುರಂತಗಳು’ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಶೇಕ್ಸ್​ ಪೀಯರ್​ ಮಹಾನ್​ ನಾಟಕಕಾರ. ಶೇಕ್ಸಪಿಯರ್​ ದುರಂತಗಳು ಮಾನವನ ಸ್ಥಿತಿ, ವಿಧಿ ಮತ್ತು ಮಹತ್ವಾಕಾಂಕ್ಷೆಯ ಬಲವಾದ ನಿರೂಪಣೆಗಳ ಮೂಲಕ ಅನ್ವೇಷಿಸುತ್ತವೆ. ಹ್ಯಾಮ್ಲೆಟ್​, ಒಥೆಲ್ಲೋ, ಕಿಂಗ್​ ಲಿಯರ್​ ಮತ್ತು ಮ್ಯಾಕ್​ಬೆತ್​ನಂತಹ ಅವರ ನಾಟಕಗಳು ಸೇಡು, ದ್ರೋಹ ಮತ್ತು ಅಧಿಕಾರದ ಭ್ರಷ್ಟ ಪ್ರಭಾವದ ಷಯಗಳನ್ನು ಪರಿಶೀಲಿಸುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾಯೆರ್ ಡಾ. ಆರ್​.ಎಂ. ಮಿರ್ದೆ ಶೇಕ್ಸ್​ಪೀಯರ್​ ಅವರನ್ನು ದೇವರ ದೃಷ್ಟಿ ಹೊಂದಿರುವವರು ಎಂದು ಬಣ್ಣಿಸಿ, ಅವರು ನಮ್ಮಲ್ಲಿ ಆಯ್ಕೆ ಮಾಡಿದ ಎಲ್ಲ ಪಾತ್ರಗಳಿಗೆ ಸಮರ್ಥನೆ ನೀಡಿದರು. ಶೇಕ್ಸ್​ಪೀಯರ್​ ಪ್ರೇಕರನ್ನು ಪ್ರೇರೇಪಿಸುವ, ಸವಾಲು ಮಾಡುವ ಮತ್ತು ಆಕರ್ಷಿಸುವ ಕೃತಿ ರಚಿಸಿದ್ದಾರೆ ಎಂದು ತಿಳಿಸಿದರು.
ವಿದ್ಯಾ ಪಾಟೀಲ ಸ್ವಾಗತಿಸಿದರು. ಶ್ವೇತಾ ಸವಣೂರ ನಿರೂಪಿಸಿದರು. ಪೂಜಾ ಮತು ಗೋದಾವರಿ ಉದ್ಘಾಟಿಸಿದರು. ಬಿಲಾಲ್​ ಪಾಣಿಬಂದ್​ ವಂದಿಸಿದರು.

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…