ಶಹಾಬಾದ್​: ಹರಿ ಭಜನೆಯಿಂದ ಮುಕ್ತಿ ಸಾಧ್ಯ

blank

ಶಹಾಬಾದ್: ಸಂಸಾರ ಸಾಗರದಿಂದ ಪಾರಾಗಿ ಮೋಕ್ಷಮಾರ್ಗದಲ್ಲಿ ಸಾಗಲು ಪ್ರತಿ ಕ್ಷಣ ಹರಿ ನಾಮಸ್ಮರಣೆ, ಭಜನೆಯಿಂದ ಸರಳವಾಗಿ ಮೋಕ್ಷ ಪಡೆಯಲು ಸಾಧ್ಯ ಎಂದು ಹರಿಕೀರ್ತನಕಾರ ಬೆಳಗಾವಿಯ ದಿಗಂಬರ ಖೋತ ಹೇಳಿದರು.

ನಗರದ ವಿಠ್ಠಲ ರುಕ್ಮೀಣಿ ದೇವಸ್ಥಾನದಲ್ಲಿ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಹರಿ ಕೀರ್ತನೆಯಲ್ಲಿ ಮಾತನಾಡಿ, ಸಂತ ತುಕಾರಾಮ, ಜ್ಞಾನದೇವ, ಸೋಪಾನಾಥರು ಪಾಂಡುರAಗನ ಸ್ಮರಣೆ ಮಾಡುತ್ತಲೇ ಸಂಸಾರದ ಗೊಡವೆಗಳಿಂದ ಪಾರಾಗಲು ದೈನಂದಿನ ಕಾಯಕದೊಂದಿಗೆ ಮೋಕ್ಷಜ್ಞಾನ ಪಡೆದಿದ್ದರು. ಅವರು ಸಾಧಿಸಿದ ಜ್ಞಾನ ಪಾಲಿಸಿ ಮುಕ್ತಿ ಪಡೆಯಬೇಕು ಎಂದರು.

ಹರಿಕೀರ್ತನೆಗೆ ರಾಜು ನಾಯ್ಕೋಡಿ, ವಿಜಯಕುಮಾರ ಜವಳೆ ತಾಳ, ಯಶ ಮಾಜ್ರೇಕರ್ ಮೃದಂಗದ ಸಾಥ್ ನೀಡಿದರು.

ಬೆಳಗ್ಗೆ ವಿಠ್ಠಲ ರುಕ್ಮೀಣಿ ದೇವರಿಗೆ ಕಾಕಡಾರತಿ, ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ ನೆರವೇರಿತು. ಅಖಂಡ ವೀಣಾ ವಾದನ ಸೇವೆ ಪ್ರಾರಂಭಿಸಲಾಯಿತು. ದೇವಸ್ಥಾನ ಸಮಿತಿಯ ಬಸವರಾಜ ಸಾತ್ಯಾಳ, ರಾಮು ಕುಸಾಳೆ, ನಾಗನಾಥ ಯಾದವ, ಕಲ್ಯಾಣ ಜವಳೆ, ಮಹೇಶ ಪ್ಯಾರಸಾಬಾದಿ, ಬಾಬಾಸಾಹೇಬ ಸಾಳುಂಕೆ, ಸಚಿನ ಹಂಚಾಟೆ, ದೇವಕುಮಾರ ಇದ್ದರು.

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…