ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಮನಸೂರ ಗ್ರಾಮದಲ್ಲಿ ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಪ್ರೇರಿತ ಗ್ರಾಮ ವಿಕಾಸ ಸೊಸೈಟಿ ಆಯೋಜಿತ ಕರ್ನಾಟಕ ಅಗ್ನಿಹೋತ್ರ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಿದ ಹಿನ್ನೆಯಲ್ಲಿ ನಗರದಲ್ಲಿ ಭಾನುವಾರ ಸೇವಾ ಅಭಿನಂದನಾ ಸಮರ್ಪಣೆ ಸಮಾರಂಭ ಆಯೋಜಿಸಲಾಗಿತ್ತು.
ಆಯೋಜಕ ಜಗದೀಶ ನಾಯಿಕ ಮಾತನಾಡಿ, ಕಾರ್ಯಕ್ರಮ ಯಶಸ್ಸಿಗೆ 8 ಜನ ಜಿಲ್ಲಾ ಸಂಯೋಜಕರು, 74 ವಿಭಾಗ ಸಂಯೋಜಕರು ಹಾಗೂ 482 ಅಗ್ನಿ ಮುಖಂಡರು, ದಾನಿಗಳು, ಸ್ವಯಂ ಸೇವಕರು ಶ್ರಮಿಸಿದ್ದಾರೆ. ಇದೇ ಕಾರಣಕ್ಕೆ 11,111 ಕುಟುಂಬಗಳ ಅಗ್ನಿಹೋತ್ರ ನಡೆಸಿ ನೋಬೆಲ್ ವರ್ಲ್ಡ್ ರೆಕಾರ್ಡ್ ಸೃಷ್ಟಿಸಲು ಸಾಧ್ಯವಾಗಿದೆ. ಇಂತಹ ಸತ್ಕಾರ್ಯದಲ್ಲಿ ತೊಡಗಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಮಾಸ್ಟರ್ ರೋಹನ್ ಶಿರಿ, ಶಮ್ಮಿ ಶಿರಿ, ಗ್ರಾಮ ವಿಕಾಸ ಸೊಸೈಟಿ, ಯುನಿವರ್ಸಲ್ ನಾಲೆಡ್ಜ್ ಟ್ರಸ್ಟ್ ಪದಾಧಿಕಾರಿಗಳು, ಇತರರು ಇದ್ದರು.
