ಮೈಸೂರು: ಕುವೆಂಪುನಗರದ ಪೂರ್ಣಪ್ರಜ್ಞ ವಿದ್ಯಾಕೇಂದ್ರ ಶಾಲೆಯ ವಾರ್ಷಿಕೋ ತ್ಸವ ಸಮಾರಂಭ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ನಡೆಯಿತು.
ಶಾಲಾ ಸಮಿತಿಯ ಹಿರಿಯ ಸದಸ್ಯರಾದ ಎಚ್.ಎನ್. ಶ್ರೀನಿವಾಸಮೂರ್ತಿ, ಎಸ್. ಕೃಷ್ಣ, ಹೊಂಗಪ್ಪ, ಬಿ.ಎಸ್.ಸಿದ್ದೇಗೌಡ, ಬಿ.ನಾಗರಾಜು, ಡಾ.ಪಿ.ಮುರಾರಿ, ಡಿ.ಎಸ್. ಜಯಪ್ಪಗೌಡ, ಪಾಪಮ್ಮ, ಮಾದಪ್ಪ, ಕೆ. ಚಿಕ್ಕವೀರಯ್ಯ ಅವರನ್ನು ಸನ್ಮಾನಿಸಲಾಯಿತು.
ಶಾಸಕ ಎಲ್.ನಾಗೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಅಂತಾ ರಾಷ್ಟ್ರೀಯ ಕ್ರೀಡಾಪಟು ವಿಜಯ ರಮೇಶ್, ನಾಗರಿಕ ವೇದಿಕೆ ಅಧ್ಯಕ್ಷ ಪಿ.ರಮೇಶ್, ಕಾರ್ಯದರ್ಶಿ ಕುಳ್ಳೇಗೌಡ, ಶಾಲೆ ಅಧ್ಯಕ್ಷ ಜೆ. ಲೋಕೇಶ್ ಇತರರು ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.