More

    ಸವ್ಯಸಾಚಿ ಕೃತಿ ಲೋಕಾರ್ಪಣೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅಭಿಜಾತ ಕಲಾವಿದ ಡಾ. ಶ್ರೀನಿವಾಸ ಪರ್ವತಿ ಅವರ ಜೀವನವನ್ನು ಆಧರಿಸಿದ ಸವ್ಯಸಾಚಿ ಕೃತಿಯನ್ನು ಮನೋಹರ ಗ್ರಂಥಮಾಲೆಯ ಪ್ರಕಾಶಕ ಡಾ.ರಮಾಕಾಂತ ಜೋಶಿ ಲೋಕಾರ್ಪಣೆಗೊಳಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಭೆ, ಸಜ್ಜನಿಕೆ, ಸ್ಥಿತಪ್ರಜ್ಞೆಯನ್ನು ಮೇಳೈಸಿದ್ದ ಶ್ರೀನಿವಾಸ ಪರ್ವತಿ ಅವರು ತಮ್ಮ ಪರೋಪಕಾರದ ಸಾರ್ಥಕ ಬದುಕಿನಿಂದ ಅನುಕರಣೀಯ ವ್ಯಕ್ತಿತ್ವ ಪಡೆದಿದ್ದರು. ಬದುಕಿನಲ್ಲಿ ಕಷ್ಟಗಳನ್ನು ಕಂಡುಂಡರು ಜೀವನೋತ್ಸಾಹ ಕಳೆದುಕೊಳ್ಳಲಿಲ್ಲ ಎಂದರು.

    ಸಾಹಿತಿ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಸ್ವತಂತ್ರ ಪೂರ್ವದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದ ಪ್ರತೀಕದಂತಿದ್ದ ಶ್ರೀನಿವಾಸ ಪರ್ವತಿ ಅವರು ತಮ್ಮ ಮಕ್ಕಳಿಗೆ ವಿದ್ಯೆ, ಸಂಸ್ಕಾರ ನೀಡಿದ್ದರು. ಸವ್ಯಸಾಚಿ ಕೃತಿ ಮಕ್ಕಳ ಋಣ ಸಂದಾಯದ ದ್ಯೋತಕವಾಗಿದೆ ಎಂದರು. ಡಾ.ಕೃಷ್ಣ ಕಟ್ಟಿ, ಕನ್ನಡ ಪರ ಹೋರಾಟಗಾರ ವೆಂಕಟೇಶ ಮರೇಗುದ್ದಿ ಮಾತನಾಡಿದರು. ರಂಗಕರ್ವಿು ಅನಂತ ದೇಶಪಾಂಡೆ ಡಾ.ದ.ರಾ.ಬೇಂದ್ರೆ ಅವರ ಅಣಕು ಪ್ರದರ್ಶನ ನೀಡಿದರು. ಕೃತಿ ಸಂಪಾದಕ ಪ್ರಹ್ಲಾದ ಪರ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀದೇವಿ ಪರ್ವತಿಕರ ಪ್ರಾರ್ಥಿಸಿದರು. ಸುಶೀಲೇಂದ್ರ ಕುಂದರಗಿ ನಿರೂಪಿಸಿದರು.ಹಣಮಂತ ಪರ್ವತಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts