ಕುಷ್ಟಗಿ: ತಾಲೂಕಿನ ಚಿಕ್ಕನಂದಿಹಾಳ ಗ್ರಾಮದ ಶರಣಪ್ಪ ಬಾವಿಕಟ್ಟಿ ಕುಟುಂಬಕ್ಕೆ ತಾಲೂಕು ಆಡಳಿತದಿಂದ ಶುಕ್ರವಾರ ಪರಿಹಾರ ಮೊತ್ತದ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.


ಇದನ್ನೂ ಓದಿ: ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ
ಬಿರುಗಾಳಿಗೆ ಮನೆಯ ಮೇಲ್ಚಾವಣಿಗೆ ಅಳವಡಿಸಿದ್ದ ತಗಡುಗಳು ಹಾರಿ ಹೋಗಿದ್ದಲ್ಲದೆ ಗೋಡೆ ಕುಸಿದು ಶರಣಪ್ಪ ಮೃತಪಟ್ಟಿದ್ದರು. ಮೃತ ಶರಣಪ್ಪ ಬಾವಿಕಟ್ಟಿ ಮನೆಗೆ ತೆರಳಿದ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ತಹಸೀಲ್ದಾರ್ ಅಶೋಕ ಶಿಗ್ಗಾವಿ ಮೃತನ ಪತ್ನಿ ಅಕ್ಕವ್ವಗೆ 5ಲಕ್ಷ ರೂ.ಗಳ ಪರಿಹಾರ ಮೊತ್ತದ ಮಂಜೂರಾತಿ ಆದೇಶ ಪತ್ರ ನೀಡಿ ಸಾಂತ್ವನ ಹೇಳಿದರು. ಕಂದಾಯ ಇಲಾಖೆಯ ಅಧಿಕಾರಿ ಶರಣಪ್ಪ ಹುಡೇದ್ ಇತರರಿದ್ದರು.