ಮುಂಬೈ: ನಾನು ಸಿನಿಮಾ ಸೆಟ್ನಲ್ಲಿ ಅಸ್ವತ್ಥಳಾಗಿದ್ದಾಗ ಬಾಲಿವುಡ್(Bollywood) ನಟ ಸಲ್ಮಾನ್ ಖಾನ್ ನನ್ನನ್ನು ಚೆನ್ನಾಗಿ ನೋಡಿಕೊಂಡು ಆರೈಕೆ ಮಾಡಿದರು ಎಂದ ನಟಿ ರಶ್ಮಿಕಾ ಮಂದಣ್ಣ ಸಲ್ಮಾನ್ ಅವರನ್ನು ಹಾಡಿ ಹೊಗಳಿದ್ದಾರೆ.
ಸಲ್ಮಾನ್ ಅವರ ಮುಂಬರುವ ಚಿತ್ರ ಸಿಕಿಂದರ್ ಸಿನಿಮಾದಲ್ಲಿ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಖಾಸಗಿ ಸುದ್ದಿವಾಹಿನಿ ಜತೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಪುಷ್ಪ-2 ಚಿತ್ರದ ಬಗ್ಗೆ ಹಂಚಿಕೊಂಡ ಬಳಿಕ ಸಿಕಿಂದರ್ ಚಿತ್ರದ ಸೆಟ್ನಲ್ಲಿ ನಡೆದ ಕೆಲ ಸ್ವಾರಸ್ಯಕರ ಮತ್ತು ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಇಷ್ಟು ವರ್ಷ ಸಹಿಸಿಕೊಂಡಿದ್ದೇನೆ..ಇನ್ನು ಸಹಿಸಲಾರೆ! ಆ ವದಂತಿಗಳ ಬಗ್ಗೆ Sai Pallavi ಫೈರ್..
”ಕೆಳಮಟ್ಟದಿಂದ ಇಂದು ಆಕಾಶ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅವರೊಟ್ಟಿಗೆ ಸಿನಿಮಾ ಮಾಡುವ ಅದೃಷ್ಟ ಈಗ ಒದಗಿ ಬಂದಿದೆ. ನಾನು ಕಂಡ ಕನಸು ನನಸಾಗಿದೆ. ಶೂಟಿಂಗ್ ವೇಳೆ ಸಲ್ಪ ಅಸ್ವಸ್ಥಳಾದೆ. ಕೂಡಲಢ ಸಲ್ಮಾನ್ ಅವರು ಸ್ಥಳಕ್ಕೆ ಬಂದು ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು. ಅಲ್ಲದೇ, ಚಿಕಿತ್ಸೆ ಬೇಕಾದ ಎಲ್ಲಾ ತರಹದ ಸೌಲಭ್ಯ ಒದಗಿಸುವಂತೆ ಸಿಬ್ಬಂದಿಗೆ ಹೇಳಿದರು” ಎಂದು ರಶ್ಮಿಕಾ ಹಾಡಿ ಹೊಗಳಿದ್ದಾರೆ.
”ನನ್ನ ಪ್ರಕಾರ ಸಲ್ಮಾನ್ ಅವರು ದೇಶದ ದೊಡ್ಡ ಸ್ಟಾರ್ ನಟರು. ಅಂತವರು ನಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ ಎಂದರೆ ಅವರ ವ್ಯಕ್ತಿತ್ವದ ಬಗ್ಗೆ ಗೊತ್ತಾಗುತ್ತದೆ ಎಂದಿರುವ ಅವರು, ಸಿಕಿಂದರ್ ಸಿನಿಮಾ ನನಗೆ ವಿಶೇಷವಾಗಿದೆ” ಎಂದು ಹೇಳಿದ್ದಾರೆ.
ಸಿಕಿಂದರ್ ಸಿನಿಮಾ ಹಿನ್ನೆಲೆ ಮುಂಬೈ ಮತ್ತು ಹೈದರಾಬಾದ್ನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಪುಷ್ಪ-2 ಸಿನಿಮಾ ಸಿನಿಮಾದ ಬಳಿಕ ರಶ್ಮಿಕಾ ಆಯುಶ್ಮಾನ್ ಖುರಾನ ಅವರೊಮದಿಗೆ ಮತ್ತೊಂದು ಸಿನಿಮಾ ಮಾಡುವ ಬಗ್ಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).