ಮದುವೆಗೆಂದು ಇಟ್ಟ ಹಣ ಬಡ ಹೃದ್ರೋಗಿಗಳ ಚಿಕಿತ್ಸೆಗೆಂದು ದೇಣಿಗೆ ನೀಡಿದ ಉಪರಾಷ್ಟ್ರಪತಿ ಮೊಮ್ಮಗಳು…

ನವದೆಹಲಿ : ತಮ್ಮ ಮದುವೆಗೆಂದು ಮೀಸಲು ಇಟ್ಟಿರುವ ಹಣವನ್ನು ಬಡ ಹೃದ್ರೋಗಿಗಳ ಚಿಕಿತ್ಸೆಗೆಂದು ನೀಡಿ, ಸಿಂಪಲ್‌ ಆಗಿ ತಾವು ಮದುವೆಯಾಗುವುದಾಗಿ ಘೋಷಿಸಿದ್ದಾರೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರ ಮೊಮ್ಮಗಳು. ನಾಯ್ಡು ಅವರ ಮೊಮ್ಮಗಳು ಸುಷ್ಮಾ ಇಂಥದ್ದೊಂದು ಮಹತ್ಕಾರ್ಯ ಮಾಡಿದ್ದಾರೆ. ಇವರ ಮದುವೆ ಮುಂದಿನ ತಿಂಗಳು ನಡೆಯಲಿದೆ. ತಮ್ಮ ಮದುವೆ ವೆಚ್ಚವನ್ನು ಕಡಿತಗೊಳಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮದುವೆಗೆ ಮೀಸಲಿಟ್ಟ ಹಣವನ್ನು ಹೃದಯ ಸಂಬಂಧ ಸಮಸ್ಯೆಯಿಂದ ಬಳಲುತ್ತಿರುವ ಬಡವರ ಮಕ್ಕಳ ಚಿಕಿತ್ಸೆಗಾಗಿ … Continue reading ಮದುವೆಗೆಂದು ಇಟ್ಟ ಹಣ ಬಡ ಹೃದ್ರೋಗಿಗಳ ಚಿಕಿತ್ಸೆಗೆಂದು ದೇಣಿಗೆ ನೀಡಿದ ಉಪರಾಷ್ಟ್ರಪತಿ ಮೊಮ್ಮಗಳು…