ಕಲಾವಿದನ ಕಲ್ಪನೆಯಲ್ಲಿ ಸ್ವರ್ಗದಲ್ಲಿ ಅಪ್ಪಾಜಿ-ಅಪ್ಪು: ಹೃದಯಸ್ಪರ್ಶಿ ಫೋಟೋ ನೋಡಿ ಭಾವುಕರಾದ ನೆಟ್ಟಿಗರು

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ, ಕನ್ನಡ ನಾಡಿನ ಕಣ್ಮಣಿಗಳು ಎಂದೇ ಬಿಂಬಿತರಾದವರು ಡಾ.ರಾಜ್‌ಕುಮಾರ್‌ ಹಾಗೂ ಅವರ ಪುತ್ರ ಪುನೀತ್‌ ರಾಜ್‌ಕುಮಾರ್‌. ಈಗ ಇಬ್ಬರೂ ಇನ್ನಿಲ್ಲ. ಆದರೆ ಅವರ ನೆನಪು ಮಾತ್ರ ಅವರ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸದಾ ಹಚ್ಚಹಸಿರಾಗಿಯೇ ಇರುತ್ತದೆ. ಕಳೆದ ವಾರ ಪುನೀತ್‌ ಅವರನ್ನು ಕಳೆದುಕೊಂಡ ಮೇಲೆ ಅವರಿಗೆ ಅವರ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಇದೀಗ ಚಿತ್ರಕಲಾವಿದನೊಬ್ಬ ರಚಿಸಿರುವ ಚಿತ್ರ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸ್ವರ್ಗದಲ್ಲಿರುವ ಅಪ್ಪ-ಮಗನ … Continue reading ಕಲಾವಿದನ ಕಲ್ಪನೆಯಲ್ಲಿ ಸ್ವರ್ಗದಲ್ಲಿ ಅಪ್ಪಾಜಿ-ಅಪ್ಪು: ಹೃದಯಸ್ಪರ್ಶಿ ಫೋಟೋ ನೋಡಿ ಭಾವುಕರಾದ ನೆಟ್ಟಿಗರು