ದುಡ್ಡಿನ ದಾಹ- ಯುವತಿಯ ಸುಟ್ಟುಹಾಕಿದ ಪಾಪಿಗಳು: ಕೇಸ್‌ ಮುಚ್ಚಿಹಾಕಲು ಅಡ್ಡ ಬಂತು ಈ ಆಡಿಯೋ ರಿಕಾರ್ಡಿಂಗ್‌!

ಮೈಸೂರು: ದುಡ್ಡಿನ ದಾಹ ಮನುಷ್ಯನನ್ನು ಎಷ್ಟು ನೀಚ ಕೃತ್ಯಕ್ಕೂ ಇಳಿಸಬಲ್ಲುದು ಎನ್ನುವುದಕ್ಕೆ ಈ ಘಟನೆಯೂ ಸಾಕ್ಷಿ. ಮನೆಯ ಸೊಸೆ ಎಷ್ಟು ದುಡ್ಡುತಂದರೂ ಸಾಲದೇ ಇನ್ನಷ್ಟು ದುಡ್ಡಿಗಾಗಿ ಹಪಹಪಿಸಿದ ಕುಟುಂಬವೊಂದು ಆಕೆಯನ್ನು ಸುಟ್ಟುಹಾಕಿ ಭೀಕರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ. ಸುನೀತಾ ಎಂಬ ಯುವತಿ ಗಂಡನ ಮನೆಯವರ ಹಣದ ದಾಹಕ್ಕೆ ಬಲಿಯಾಗಿದ್ದಾರೆ. ಅಡುಗೆ ಮಾಡುವಾಗ ಬೆಂಕಿ ತಗುಲಿ ಮೃತಪಟ್ಟಿರುವುದಾಗಿ ಕುಟುಂಬದವರು ಸುನೀತಾಳ ಮನೆಯವರನ್ನು ನಂಬಿಸಲೂ ಯಶಸ್ವಿಯಾಗಿಬಿಟ್ಟಿದ್ದರು. ಈ ಸಂಬಂಧ ಇದು ಸಹಜ ಸಾವು ಎಂದು … Continue reading ದುಡ್ಡಿನ ದಾಹ- ಯುವತಿಯ ಸುಟ್ಟುಹಾಕಿದ ಪಾಪಿಗಳು: ಕೇಸ್‌ ಮುಚ್ಚಿಹಾಕಲು ಅಡ್ಡ ಬಂತು ಈ ಆಡಿಯೋ ರಿಕಾರ್ಡಿಂಗ್‌!