ತರೀಕೆರೆ ಟು ಮಂಗಳೂರು: ಅಲ್ಲಿಂದಿಲ್ಲಿಗೆ ಬಂದು ದರೋಡೆ ಮಾಡಿ ಚಳ್ಳೇಹಣ್ಣು ತಿನ್ನಿಸ್ತಿದ್ದ ಖದೀಮರೂ ಅಂತೂ ಸಿಕ್ಕಿಬಿದ್ರು!

ಮಂಗಳೂರು: ಮಂಗಳೂರು ಪೊಲೀಸರಿಗೆ ಸವಾಲಾಗಿದ್ದ ಸರಣಿ ದೈವಸ್ಥಾನಗಳ ಕಳ್ಳತನ ಪ್ರಕರಣವನ್ನು ಕೊನೆಗೂ ಭೇದಿಸಿದ್ದಾರೆ. 13 ದೈವಸ್ಥಾನ, ದೇವಸ್ಥಾನ, 3 ಮನೆಗಳ್ಳತ‌ನ ಪ್ರಕರಣ ಭೇದಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಚಿಕ್ಕಮಗಳೂರು ತರಿಕೆರೆ ನಿವಾಸಿ ನಾಗಾನಾಯ್ಕ್, ದಾವಣಗೆರೆ ಚನ್ನಗಿರಿ ನಿವಾಸಿ ಮಾರುತಿ ಬಂಧಿತ ಆರೋಪಿಗಳು. ಇವರಿಂದ 28 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತರೀಕೆರೆಯಿಂದ ಮಂಗಳೂರಿಗೆ ಬಂದು ಕಳ್ಳತನ ನಡೆಸಿ ಊರಿಗೆ ಪರಾರಿಯಾಗುತಿದ್ದ ಇವರನ್ನು ಹಿಡಿಯುವುದೇ … Continue reading ತರೀಕೆರೆ ಟು ಮಂಗಳೂರು: ಅಲ್ಲಿಂದಿಲ್ಲಿಗೆ ಬಂದು ದರೋಡೆ ಮಾಡಿ ಚಳ್ಳೇಹಣ್ಣು ತಿನ್ನಿಸ್ತಿದ್ದ ಖದೀಮರೂ ಅಂತೂ ಸಿಕ್ಕಿಬಿದ್ರು!