ಮಹಾಂತ್‌ ಸ್ವಾಮೀಜಿ ಸಾವಿನ ರಹಸ್ಯಕ್ಕೆ ಟ್ವಿಸ್ಟ್‌: ಘಟನೆಗೂ ಮುನ್ನ ವಿಡಿಯೋ ರೆಕಾರ್ಡಿಂಗ್‌

ಲಖನೌ: ಅಖಿಲ ಭಾರತೀಯ ಅಖಾಡ ಪರಿಷತ್ ನ ಅಧ್ಯಕ್ಷರಾಗಿದ್ದ ಮಹಾಂತ್ ನರೇಂದ್ರ ಗಿರಿ ಅವರು ನಿಗೂಢವಾಗಿ ಮೃತಪಟ್ಟಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ನೇಣು ಬಿಗಿದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಊಹಾಪೋಹಗಳು ಎದ್ದಿದ್ದು, ಇದನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ಕೂಡ ವಹಿಸಿದೆ. ಈ ನಡುವೆಯೇ ಸ್ವಾಮೀಜಿ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ ಒಂದು ಸಿಕ್ಕಿತ್ತು. ಅದರಲ್ಲಿ ಅವರು ತಮ್ಮ ಶಿಷ್ಯ ಆನಂದಗಿರಿ ತಮಗೆ ಹಿಂಸೆ ನೀಡುತ್ತಿರುವ ಬಗ್ಗೆ ಉಲ್ಲೇಖಿಸಿದ್ದರು. … Continue reading ಮಹಾಂತ್‌ ಸ್ವಾಮೀಜಿ ಸಾವಿನ ರಹಸ್ಯಕ್ಕೆ ಟ್ವಿಸ್ಟ್‌: ಘಟನೆಗೂ ಮುನ್ನ ವಿಡಿಯೋ ರೆಕಾರ್ಡಿಂಗ್‌