ಹಂಪಿಯ ಪಾರಂಪರಿಕ ತಾಣಕ್ಕೂ ಎದುರಾಯ್ತು ಜಲಕಂಟಕ! ಮುಳುಗಿಹೋದವು ಐತಿಹಾಸಿಕ ಸ್ಮಾರಕಗಳು

ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಇರೋ ತುಂಗಭದ್ರಾ ಜಲಾಶಯದಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗಿದ್ದು, ಇದಾಗಲೇ ಹಂಪಿನ ಹಲವಾರು ಸ್ಮಾರಕಗಳು ಮುಳುಗಿ ಹೋಗಿವೆ. ಹಂಪಿಯಲ್ಲಿರುವ ಧಾರ್ಮಿಕ ವಿಧಿವಿಧಾನ ಮಂಟಪ, ಸ್ನಾನಘಟ್ಟ ಈಗಾಗಲೇ ಮುಳುಗಡೆಯಾಗಿದೆ. ಇನ್ನು ವಿಜಯ ವಿಠಲ ದೇವಸ್ಥಾನದ ಬಳಿಯಲ್ಲಿರುವ ಪುರಂದರದಾಸರ ಮಂಟಪ ಮುಳುಗಡೆಯಾಗುವತ್ತ ಸಾಗಿದೆ. ಕೋದಂಡರಾಮ ದೇವಸ್ಥಾನದ ಬಳಿ ನೀರು ಹರಿಯುತ್ತಿದ್ದು, ಹೊರಹರಿವಿನ ಪ್ರಮಾಣ ಹೆಚ್ಚಾದಲ್ಲಿ ಅದೂ ಸಹ ಮುಳುಗಡೆಯಾಗಲಿದೆ. ಈಗಾಗಲೇ ಕೋದಂಡರಾಮ ದೇವಸ್ಥಾನಕ್ಕೆ ಹೋಗುವ ದಾರಿಯ ಸಮೀಪವೇ … Continue reading ಹಂಪಿಯ ಪಾರಂಪರಿಕ ತಾಣಕ್ಕೂ ಎದುರಾಯ್ತು ಜಲಕಂಟಕ! ಮುಳುಗಿಹೋದವು ಐತಿಹಾಸಿಕ ಸ್ಮಾರಕಗಳು