ಬೆಡ್‌ಗಾಗಿ ಕಾದೂ ಕಾದೂ ಆಸ್ಪತ್ರೆ ಎದುರೇ ಪ್ರಾಣ ಬಿಟ್ಟ ಸೋಂಕಿತ- ಕುಳಿತಲ್ಲೇ ಬಂದೆರಗಿದ ಸಾವು!

ಆನೇಕಲ್‌: ಕರೊನಾ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಕ್ಷಣಕ್ಷಣಕ್ಕೂ ಏರುತ್ತಲೇ ಸಾಗಿದೆ. ಆನೇಕಲ್ ತಾಲ್ಲೂಕಿನ ಹಾಲ್ದೇನಹಳ್ಳಿ ನಿವಾಸಿ ನಾಗೇಶ್ ಎನ್ನುವವರು ಕರೊನಾದ ವರದಿ ಬರುವುದಕ್ಕಾಗಿ ಕಾದೂ ಕಾದೂ ಆಸ್ಪತ್ರೆಯಲ್ಲಿಯೇ ಪ್ರಾಣ ಬಿಟ್ಟ ಆತಂಕದ ಘಟನೆ ನಡೆದಿದೆ. ಜ್ವರದಿಂದ ಬಳಲುತ್ತಿದ್ದ ನಾಗೇಶ್‌ ಅವರಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಆದರೆ ವರದಿ ಬರುವುದು ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಬೆಡ್ ಸಿಗಲಿಲ್ಲ. ಅದಕ್ಕಾಗಿ ಸರ್ಕಾರಿ ಆಸ್ಪತ್ರೆಯ ಎದುರು ಕಾಯ್ದು ಕಾಯ್ದು ನಂತರ ಕುಳಿತಲ್ಲಿಯೇ ಬಿದ್ದು ನಾಗೇಶ್‌ ಮೃತಪಟ್ಟಿದ್ದಾರೆ. … Continue reading ಬೆಡ್‌ಗಾಗಿ ಕಾದೂ ಕಾದೂ ಆಸ್ಪತ್ರೆ ಎದುರೇ ಪ್ರಾಣ ಬಿಟ್ಟ ಸೋಂಕಿತ- ಕುಳಿತಲ್ಲೇ ಬಂದೆರಗಿದ ಸಾವು!