ಚಿತ್ರದುರ್ಗದಲ್ಲೊಂದು ಅಮಾನವೀಯ ಘಟನೆ- ವಿದ್ಯಾರ್ಥಿನಿಯ ಬಟ್ಟೆ ಎಳೆದಾಡಿದ ಕಾಮುಕರು: ಮನನೊಂದು ಆತ್ಮಹತ್ಯೆ

ಚಿತ್ರದುರ್ಗ: ವಿದ್ಯಾರ್ಥಿನಿಯೊಬ್ಬಳ ಬಟ್ಟೆಯನ್ನು ಎಳೆದು ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣವಾಗಿರುವ ಆಘಾತಕಾರಿ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೋಡಿಹಳ್ಳಿ ಹಟ್ಟಿ ಗ್ರಾಮದಲ್ಲಿ ನಡೆದಿದೆ. 17 ವರ್ಷದ ವಿದ್ಯಾರ್ಥಿನಿ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿದ್ಯಾರ್ಥಿನಿಗೆ ಕೆಲವು ಕಿಡಿಗೇಡಿಗಳು ದಿನವೂ ಕಿರುಕುಳ ನೀಡುತ್ತಿದ್ದರು. ಈ ಹಿಂದೆ ಹೀಗೆ ಮಾಡದಂತೆ ಗ್ರಾಮಸ್ಥರು ಯುವಕರಿಗೆ ಎಚ್ಚರಿಕೆ ಕೂಡ ನೀಡಿದ್ದರು. ಆದರೂ ಅದೇ ಕಿಡಿಗೇಡಿತನವನ್ನು ಅವರು ಮುಂದುವರೆಸಿದ್ದರು. ಮೊನ್ನೆ ವಿದ್ಯಾರ್ಥಿನಿಯ ಬಟ್ಟೆಯನ್ನು ಎಳೆದಾಡಿ ಹಿಂಸೆ ನೀಡಿದ್ದಾರೆ. ಇದರಿಂದ ಮನನೊಂದ … Continue reading ಚಿತ್ರದುರ್ಗದಲ್ಲೊಂದು ಅಮಾನವೀಯ ಘಟನೆ- ವಿದ್ಯಾರ್ಥಿನಿಯ ಬಟ್ಟೆ ಎಳೆದಾಡಿದ ಕಾಮುಕರು: ಮನನೊಂದು ಆತ್ಮಹತ್ಯೆ