ಸರ್ಕಾರಿ ಕಚೇರಿಯಲ್ಲೇ ಮಹಿಳಾ ಅಧಿಕಾರಿಗೆ ಧಮ್ಕಿ; ‘ನೀನು ಎಲ್ಲಿಗೆ ಹೋದ್ರೂ ಬಿಡಲ್ಲ’ ಎಂದಿದ್ದ ಆರ್​​ಟಿಐ ಕಾರ್ಯಕರ್ತನ ಬಂಧನ

ಬೆಂಗಳೂರು: ಸರ್ಕಾರಿ ಕಚೇರಿಯಲ್ಲೇ ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿದ್ದ ಆರ್​​ಟಿಐ ಕಾರ್ಯಕರ್ತನನ್ನು ರಾಜಧಾನಿಯ ಪೊಲೀಸರು ಬಂಧಿಸಿದ್ದಾರೆ. ಆರ್​ಟಿಐ ಕಾರ್ಯಕರ್ತ ಕೃಷ್ಣಮೂರ್ತಿ ಬಂಧಿತ ಆರೋಪಿ. ಈತ ಬೆಂಗಳೂರಿನ ಕತ್ರಿಗುಪ್ಪೆ ವಾರ್ಡ್ ನಂ.163ರ ವಾರ್ಡ್ ಅಸಿಸ್ಟೆಂಟ್ ಇಂಜಿನಿಯರ್ ಶ್ವೇತಾ ಅವರ ಕಚೇರಿಗೆ ಡಿ. 18ರಂದು ತೆರಳಿದ್ದ. ಅಲ್ಲಿ ಶ್ವೇತಾ ಅವರನ್ನು ನಿಂದಿಸಿದ್ದಲ್ಲದೆ, ನೀನು ಸರ್ಕಾರದ ಯಾವ ಡಿಪಾರ್ಟ್​ಮೆಂಟ್​ಗೆ ಹೋದ್ರೂ ಬಿಡಲ್ಲ, ನಿನ್ನನ್ನು ಹೇಗೆ ಕೆಲಸದಿಂದ ತೆಗೆಯಬೇಕು ಎಂದು ಗೊತ್ತಿದೆ ಎಂದು ಬೆದರಿಸಿದ್ದ. ಇದನ್ನೂ ಓದಿ: ಉಡುಪಿಗೂ ಪ್ರವೇಶಿಸಿದ ಒಮಿಕ್ರಾನ್​; ರಾಜ್ಯದಲ್ಲಿ ಹೆಚ್ಚುತ್ತಲೇ … Continue reading ಸರ್ಕಾರಿ ಕಚೇರಿಯಲ್ಲೇ ಮಹಿಳಾ ಅಧಿಕಾರಿಗೆ ಧಮ್ಕಿ; ‘ನೀನು ಎಲ್ಲಿಗೆ ಹೋದ್ರೂ ಬಿಡಲ್ಲ’ ಎಂದಿದ್ದ ಆರ್​​ಟಿಐ ಕಾರ್ಯಕರ್ತನ ಬಂಧನ