ಹುಲಿಯತ್ತ ವೃಷಭನ ಗಮನ: ರಾಜ್- ರಿಷಬ್ ಜೋಡಿಯ 2ನೇ ಪೋಸ್ಟರ್ ಬಂತು

blank
blank

ಬೆಂಗಳೂರು: ‘ಗರುಡ ಗಮನ ವೃಷಭ ವಾಹನ’ ಶೀರ್ಷಿಕೆ ಮೂಲಕ ಸದ್ದು ಮಾಡುತ್ತಿರುವ ರಾಜ್- ರಿಷಬ್ ಕಾಂಬಿನೇಷನ್ ಸಿನಿಮಾ, ಇತ್ತೀಚೆಗಷ್ಟೇ ಫಸ್ಟ್ ಲುಕ್ ಪೋಸ್ಟರ್ ಮೂಲಕ ‘ಗಮನ’ ಸೆಳೆದಿತ್ತು. ಈಗ ಇದೇ ‘ವಾಹನ’ ಮತ್ತೊಂದಿಷ್ಟು ಅಪ್​ಡೇಟ್ಸ್ ಜತೆಗೆ ಆಗಮಿಸಿದೆ. ಅಂದರೆ, ಚಿತ್ರದಲ್ಲಿ ಅಂಡರ್​ವರ್ಲ್ಡ್​ನಷ್ಟೇ ಪ್ರಧಾನವಾದ ಇನ್ನೂ ಒಂದು ಅಂಶ ಇದೆ ಎಂಬುದನ್ನು ಹೇಳುವ ಪ್ರಯತ್ನ ನಿರ್ದೇಶಕರಿಂದಾಗಿದೆ. ಅದೇನು ಎಂಬುದನ್ನು ಮಂಗಳವಾರ ಬಿಡುಗಡೆ ಮಾಡಲಾದ ಹೊಸ ಪೋಸ್ಟರ್​ನಲ್ಲಿ ತಿಳಿಸಿದ್ದಾರೆ. ಅದೇ ಹುಲಿವೇಷ!

ಕರಾವಳಿ ಎಂದರೆ ಅಲ್ಲಿ ಮೀನು, ಕಡಲು ಹೇಗೆ ಸಾಮಾನ್ಯವೋ, ಹುಲಿಕುಣಿತವೂ ಅಷ್ಟೇ ಸಾಮಾನ್ಯ. ಹಾಗಾಗಿ ಆ ಕುಣಿತವನ್ನು ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿಯೂ ಅಳವಡಿಸಿದ್ದಾರೆ ನಿರ್ದೇಶಕ ರಾಜ್.ಬಿ ಶೆಟ್ಟಿ. ‘ಇದೊಂದು ಗ್ಯಾಂಗ್​ಸ್ಟರ್ ಸಿನಿಮಾ ಆಗಿರುವುದರಿಂದ ಹೊಡಿ-ಬಡಿ ಕಥೆಗೆ ಹುಲಿವೇಷದ ನಂಟನ್ನೂ ಬೆರೆಸಿದ್ದೇವೆ. ಆ ಕುಣಿತದ ಕುತೂಹಲವನ್ನು ಸಿನಿಮಾದಲ್ಲಿಯೇ ನೋಡಿ ಸವಿಯಬೇಕು’ ಎಂದಷ್ಟೇ ಮಾಹಿತಿ ನೀಡುತ್ತಾರೆ ರಾಜ್.

ಇಬ್ಬರು ರೌಡಿಗಳ ಕಥೆ ಹೊಂದಿರುವ ಈ ಸಿನಿಮಾ ಪೂರ್ತಿ ಚಿತ್ರೀಕರಣ ದಕ್ಷಿಣ ಕನ್ನಡ ಭಾಗದಲ್ಲಿ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಭೂಗತ ಜಗತ್ತಿನ ಸುತ್ತ ಹೆಣೆದ ಕಾಲ್ಪನಿಕ ಕಥೆಯಲ್ಲಿ ರಿಷಬ್ ಶೆಟ್ಟಿ ಮತ್ತು ರಾಜ್ ಶೆಟ್ಟಿ ರೌಡಿಗಳಾಗಿ ಕಾಣಿಸಿಕೊಂಡಿದ್ದು, ಈ ಇಬ್ಬರಿಗೂ ಯಾವುದೇ ನಾಯಕಿಯರಿಲ್ಲ. ಎಲ್ಲ ಅಂದುಕೊಂಡಂತೆ ಆದರೆ, ಜೂನ್ ತಿಂಗಳಲ್ಲಿ ‘ಗರುಡ ಗಮನ ವೃಷಭ ವಾಹನ’ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ ರಾಜ್ ಶೆಟ್ಟಿ. ಸ್ನೇಹಿತರೊಂದಿಗೆ ಸೇರಿ ‘ಲೈಟರ್ ಬುದ್ಧ ಫಿಲಮ್್ಸ’ ಎಂಬ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿರುವ ರಾಜ್ ಶೆಟ್ಟಿ, ಈ ಬ್ಯಾನರ್​ನಿಂದ ಈ ಚಿತ್ರವನ್ನು ನಿರ್ವಿುಸಿದ್ದಾರೆ.

14 ವರ್ಷ ವನವಾಸದಿಂದ ಮರಳಿ ಬಂದರು ದೀಪಕ್

Share This Article

ಮೀನಿನ ಕಣ್ಣು ಆರೋಗ್ಯಕ್ಕೆ ಉತ್ತಮ! ಸೇವನೆಯಿಂದ ಏನ್ನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Fish Eye

Fish Eye: ಮೀನಿನ ಸೇವನೆ ಆರೋಗ್ಯಕ್ಕೆ ಎಷ್ಟು ಉತ್ತಮವೋ, ಅದಕ್ಕಿಂತ ಹೆಚ್ಚಿನ ಆರೋಗ್ಯಕಾರಿ ಅಂಶಗಳು ಮೀನಿನ…

ಪಾರ್ಲಿಮೆಂಟ್​ ಮೆನುವಿನಲ್ಲಿ ರಾಗಿ ಇಡ್ಲಿ ದರ್ಬಾರ್​! ಮಾಡೊದೇಗೆ? ಇಲ್ಲಿದೆ ಸಿಂಪಲ್ಸ್​ ಟಿಪ್ಸ್​​.. | Ragi Idli

Ragi Idli : ಇತ್ತೀಚಿನ ವೇಗದ ಆಧುನಿಕ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದೆ ಕಷ್ಟವಾಗಿದೆ. ಆದರಲ್ಲೂ ಪಟ್ಟಣ…