ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ಭಾಗದಲ್ಲಿ ಕಲ್ಲು ಕ್ವಾರಿಗೆ ( Stone Quarry) ಜಮೀನಿನ ಮಾರ್ಗದಲ್ಲಿ ರಸ್ತೆ ನಿರ್ಮಾಣದ ವೇಳೆ ಉಂಟಾದ ಗಲಾಟೆಯ ಸಂದರ್ಭದಲ್ಲಿ ಫೈರಿಂಗ್ ನಡೆದು ವ್ಯಕ್ತಿಯೊಬ್ಬನಿಗೆ ಗಾಯವಾಗಿದೆ.

ಮಂಚೇನಹಳ್ಳಿ ರವಿ (39) ಗಾಯಾಳು. ಈತನ ತೊಡೆಯ ಭಾಗಕ್ಕೆ ಬುಲೆಟ್ ತಗುಲಿದ್ದು ಮಂಚೇನಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಇದೀಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕ್ವಾರಿ ಮಾಲೀಕನಿಂದ ಫೈಯರ್
ಕ್ವಾರಿ ಮಾಲೀಕ ಎನ್ನಲಾದ ಸಕಲೇಶ್ ಗುಂಪಿನಲ್ಲಿ ಪಿಸ್ತೂಲ್ ನಿಂದ ಫೈಯರ್ ಮಾಡಿದತ. ಹಾಗೆಯೇ ಹಲವರಿಗೆ ಪಿಸ್ತೂಲ್ ತೋರಿಸಿ ಭಯ ಬೀಳಿಸಿದ್ದು, ಬನ್ರೋ ಬನ್ನಿ, ನಿಮಗೆ ತಾಕತ್ತು ಇದ್ದಲ್ಲಿ ಬನ್ನಿ ಎಂದು ಗರ್ಜಿಸಿದ್ದಾನೆ. ಇದರಿಂದ ದೊಣ್ಣೆಗಳು ತಗೊಳ್ಳೋರೋ, ಬಿಡೋದು ಬೇಡ, ಏನಾಗುತ್ತದೆ ಅನ್ನೋದನ್ನು ನೋಡೇ ಬಿಡೋಣ ಎಂದು ಕೂಗಾಟದಲ್ಲಿ ಗುಂಪು ರೊಚ್ಚಿಗೇಳುತ್ತಿದ್ದಂತೆ ಕಾರಿನಲ್ಲಿ ಕಾಲ್ಕಿತ್ತಿದ್ದಾನೆ.
ಇದನ್ನೂ ಓದಿ:ಬಂತು ನೋಡಿ ಕೋಳಿಯ ಹೊಸ ತಳಿ; ಇವು ವರ್ಷಕ್ಕೆ 200 ಮೊಟ್ಟೆಗಳನ್ನು ಇಡುತ್ತವೆಯಂತೆ| Egg
ಸಕಲೇಶ್ಗೂ ತಲೆಗೆ ಗಾಯವಾಗಿದೆ. ಮಾತಿನ ಚಕಮಕಿ ವೇಳೆ ಯಾರೋ ಕಲ್ಲು ಎಸೆದಿದ್ದಾರೆ. ಇದು ತಗುಲಿ ತಲೆಯಿಂದ ರಕ್ತ ಸೋರುತ್ತಿದ್ದಂತೆ ಕಾರಿನಲ್ಲಿದ್ದ ಪಿಸ್ತೂಲ್ ಮತ್ತೆ ತೆಗೆದು ಎದುರಿಸಿದ್ದಾನೆ.
ಪ್ರಕರಣದ ಹಿನ್ನೆಲೆ
ಮಂಚೇನಹಳ್ಳಿಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಪಡೆದುಕೊಂಡಿದ್ದ ಗಣಿ ಗುತ್ತಿಗೆದಾರರು ಅಕ್ರಮವಾಗಿ ಜಮೀನಿನ ನಡುವೆ ದಾರಿಯನ್ನು ನಿರ್ಮಿಸುತ್ತಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹಸಿರಿನ ವಾತಾವರಣದಲ್ಲಿ ಗಣಿಗಾರಿಕೆಯಿಂದ ಪರಿಸರ ಹಾಳಾಗುತ್ತದೆ. ಕೃಷಿ ಚಟುವಟಿಕೆಗೂ ಮಾರಕ. ಇದಕ್ಕೆ ಕಲ್ಲು ಕ್ವಾರಿಗೆ ಅನುಮತಿ ನೀಡಬಾರದು ಎಂದು ಸ್ಥಳೀಯರು ಒತ್ತಾಯಿಸಿಕೊಂಡು ಬಂದಿದ್ದಾರೆ. ಜನರ ವಿರೋಧದ ನಡುವೆಯೂ ಅಧಿಕಾರಿಗಳು ಪ್ರಭಾವಿಗಳ ಶಿಫಾರಸ್ಸಿಗೆ ಮಣಿದು ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದ್ದು, ಗಣಿ ಮಾಲೀಕರು ಕರೆ ತಂದಿದ್ದ ಗುಂಪು ಹಾಗೂ ಸ್ಥಳೀಯ ಗುಂಪಿನ ನಡುವೆ ಗಲಾಟೆ ನಡೆದಿದೆ.
ಪಹಲ್ಗಾಮ್ ಉಗ್ರರ ದಾಳಿ; ಗುಪ್ತಚರ ಇಲಾಖೆ ವೈಫಲ್ಯ: ಅಸಾದುದ್ದೀನ್ ಓವೈಸಿ ಆರೋಪ | Terror Attack
ಟರ್ಕಿಯ ಇಸ್ತಾನ್ಬುಲ್ನಲ್ಲಿ 6.2 ತೀವ್ರತೆ ಭೂಕಂಪನ; ಬೃಹತ್ ಕಟ್ಟಡಗಳು ಶೇಕ್! | Earthquake