ನಿವೃತ್ತರು ಆಶಾವಾದಿಗಳಾಗಿ ಬದುಕು ಸಾಗಿಸಬೇಕು; ನಾಗೇಂದ್ರರಾವ್​

blank

ರಾಣೆಬೆನ್ನೂರ: ನಿವೃತ್ತರು ಆಶಾವಾದಿಗಳಾಗಿ ತಮ್ಮ ಮುಂದಿನ ಬದುಕನ್ನು ಸಾಗಿಸಬೇಕು ಎಂದು ಎಸ್​ಬಿಐ ವ್ಯವಸ್ಥಾಪಕ ಸಿ. ನಾಗೇಂದ್ರರಾವ್​ ಹೇಳಿದರು.
ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಪಿಂಚಣಿದಾರರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಿಜಿಟಲ್​ ಬ್ಯಾಂಕಿಂಗ್​ ಪ್ರಾರಂಭವಾದ ಮೇಲೆ ಬ್ಯಾಂಕ್​ಗಳಲ್ಲಿ ಜನ ಸಮೂಹ ಕಡಿಮೆಯಾಗಿದೆ. ನಿವೃತ್ತ ನೌಕರರಿಂದ ಬ್ಯಾಂಕ್​ನಲ್ಲಿ ಹೆಚ್ಚಿನ ಜನರನ್ನು ಕಾಣುವಂತಾಗಿದೆ. ನಮ್ಮ ಬ್ಯಾಂಕಿನಲ್ಲಿ ಏನೇ ಸಮಸ್ಯೆಗಳಿದ್ದರೂ ನಿವೃತ್ತ ನೌಕರರು ನನ್ನನ್ನು ಭೇಟಿಯಾದರೆ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತೇನೆ ಎಂದರು.
ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್​.ಬಿ. ಅಣ್ಣಿಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ.ಎಂ. ಕರ್ಜಗಿ ಅಧ್ಯಕ್ಷತೆ ವಹಿಸಿದ್ದರು. 150ಕ್ಕೂ ಅಧಿಕ ನಿವೃತ್ತ ನೌಕರರಿಗೆ ಸನ್ಮಾನ ಮಾಡಲಾಯಿತು.
ಪ್ರಮುಖರಾದ ಎಸ್​.ಎಂ. ಸಂಕಮ್ಮನವರ, ಎಸ್​.ಬಿ. ಕೊಪ್ಪದ, ಬಿ.ಎಸ್​. ಮಾಸಣಗಿ, ಎನ್​.ಎಸ್​. ಪಾಟೀಲ, ಬಿ.ಬಿ. ಗೌಡರ, ಟಿ.ಎನ್​. ಮುತ್ತಳ್ಳಿ, ಎಸ್​.ಕೆ. ನೇಶ್ವಿ, ಎಂ.ಪಿ. ಮುದ್ದಿ, ಎಂ.ಬಿ. ಬೆನಕಣ್ಣವರ, ಜಿ.ಜಿ. ಮಹಾಂತಶೆಟ್ಟರ, ನಾಗರತ್ನಮ್ಮ, ಶಕುಂತಲಾ ಯಕನಹಳ್ಳಿ, ಸುಂದ್ರಾ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…