ಸಿದ್ದಾಪುರ: ತಾಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮೀನುಗಾರರ ಸೊಸೈಟಿ ರಚನೆಯಲ್ಲಿ ಮೀನು ಮಾರಾಟ ಉದ್ಯೋಗವನ್ನು ಮಾಡುತ್ತಿರುವ ಎಲ್ಲ ಸಮುದಾಯದವರಿಗೆ ಅವಕಾಶ ಕಲ್ಪಿಸಬೇಕು ಎಂದು ಮೀನು ಮಾರಾಟಗಾರರ ವಿಶ್ವಸ್ಥ ಮಂಡಳಿ ವತಿಯಿಂದ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಪಪಂ ಮಳಿಗೆಯಲ್ಲಿ ಹಲವಾರು ವರ್ಷಗಳಿಂದ ಮೀನು ಮಾರಾಟ ಮಾಡುತ್ತಿದ್ದು, ಮೀನುಗಾರಿಕೆಯನ್ನೇ ಅಲವಂಬಿಸಿ ಎಲ್ಲ ಸಮುದಾಯದ ಜನರು ಜೀವನ ನಡೆಸುತ್ತಿದ್ದೇವೆ. ಈಗ ತಾಲೂಕಿನಲ್ಲಿ ಮೀನುಗಾರಿಕೆ ಸೊಸೈಟಿಯನ್ನು ಪ್ರಾರಂಭಿಸುತ್ತಿರುವುದು ಸಂತಸದ ಸಂಗತಿ. ಆದರೆ, ಮೀನುಗಾರಿಯನ್ನು ನಂಬಿ ಉದ್ಯೋಗ ಮಾಡುವ ಎಲ್ಲ ಸಮುದಾಯದ ಜನರಿಗೆ ಸರ್ಕಾರದ ಸೌಲಭ್ಯ ಸಿಗಬೇಕು ಹಾಗೂ ಆಡಳಿತ ಮಂಡಳಿ ರಚನೆ ಸಂದರ್ಭದಲ್ಲಿ ನಮ್ಮನ್ನು ಪರಿಗಣಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸುನೀಲ ಎಂ. ಫರ್ನಾಂಢೀಸ್, ಬಾಪು ಬುಡನ್ ಸಾಬ್, ಮಹೇಶ ಮಹಾಲೆ, ಗಂಗಾಧರ ಚಲವಾದಿ, ಹೇಮಗರಿ, ಶರೀಫ, ಅಬ್ಜಲ್, ರಾಮ ನಾಯ್ಕ, ಮೀರಾ ಮೇಸ್ತ, ಅಂತೋನ್ ಫರ್ನಾಂಡಿಸ್, ವಿನಾಯಕ, ಬಾಷಾ ಇತರರಿದ್ದರು.