ಮದ್ದೂರು: ನವರಾತ್ರಿ ಅಂಗವಾಗಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನದಲ್ಲಿನ ವಿಶಾಲಾಕ್ಷಿ ಅಮ್ಮನವರಿಗೆ ಮಂಗಳವಾರ ವಿಶೇಷ ಅಲಂಕಾರ ಹಾಗೂ ಹಲವಾರು ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸೋಮವಾರ ಸಂಜೆ ಶ್ರುತಿಸಾಗರ ಭಜನಾ ಮಂಡಳಿ ನಡೆಸಿಕೊಟ್ಟ ಭಜನಾ ಕಾರ್ಯಕ್ರಮ ಭಕ್ತರ ಗಮನ ಸೆಳೆಯಿತು. ನಂತರ ದೇವಾಲಯದಲ್ಲಿ ಶಿವ, ಪಾರ್ವತಿ ಉತ್ಸವ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರರಾವ್, ಶಂಕರಸಭಾ ಅಧ್ಯಕ್ಷ ಗುರುಸ್ವಾಮಿ ಹಾಗೂ ಮಂಜುನಾಥ್, ಶಿವರಾಂ, ಸತ್ಯನಾರಾಯಣರಾವ್, ಕೆ.ಆರ್ಮಂಜುನಾಥ್ ಇದ್ದರು.
TAGGED:MadduruMandyaಕೆ.ಆರ್ಮಂಜುನಾಥ್ಗುರುಸ್ವಾಮಿತಿಸಾಗರ ಭಜನಾ ಮಂಡಳಿದೇವಸ್ಥಾನನವರಾತ್ರಿ ಅಂಗವಾಗಿಪಟ್ಟಣದ ಪುರಾಣ ಪ್ರಸಿದ್ಧಪಾರ್ವತಿ ಉತ್ಸವಪ್ರಧಾನ ಅರ್ಚಕ ರಾಘವೇಂದ್ರರಾವ್ಭಕ್ತರಿಗೆ ತೀರ್ಥ ಪ್ರಸಾದಭಜನಾ ಕಾರ್ಯಕ್ರಮಮಂಜುನಾಥ್ಮಹಾಮಂಗಳಾರತಿವಿಶಾಲಾಕ್ಷಿ ಅಮ್ಮವಿಶೇಷ ಅಲಂಕಾರವಿಶ್ವೇಶ್ವರಸ್ವಾಮಿಶಂಕರಸಭಾ ಅಧ್ಯಕ್ಷಶಿವಶಿವರಾಂಶ್ರೀ ಕಾಶಿಸತ್ಯನಾರಾಯಣರಾವ್ಹಲವಾರು ಧಾರ್ಮಿಕ ಕಾರ್ಯಕ್ರಮ