ಗೆಜೆಟ್ ನಿಯಮದಂತೆ ರೈತರಿಗೆ ಪರಿಹಾರ

blank

ಸೊರಬ: ಬರ, ಅತಿವೃಷ್ಟಿ, ಕೃಷಿಗೆ ಸಂಬಂಧಿಸಿ ಸರ್ಕಾರ ನೀಡುವ ಗೆಜೆಟ್ ನಿಯಮಾವಳಿ ಪ್ರಕಾರ ಬೆಳೆ ವಿಮೆ ನೀಡಲಾಗುತ್ತದೆ. ಹಾಗಾಗಿ ಭತ್ತ, ಜೋಳ ಬೆಳೆಗಳಿಗೆ ನಿಗದಿಪಡಿಸಿದ ತಿಂಗಳಲ್ಲಿ ವಿಮಾ ಕಂತನ್ನು ರೈತರು ಪಾವತಿಸಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್ ಹೇಳಿದರು.
ತಾಲೂಕಿನ ಮಾವಲಿ ಗ್ರಾಪಂ ವ್ಯಾಪ್ತಿಯ ಅಡಕೆ, ಭತ್ತ, ಜೋಳ ಬೆಳೆಗಳಿಗೆ ನೀಡುವ ಬೆಳೆ ವಿಮಾ ಯೋಜನೆಗೆ ಸಂಬಂಧಿಸಿ ರೈತರೊಂದಿಗೆ ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಪ್ರತಿ ಏಳು ವರ್ಷಗಳ ಇಳುವರಿಯನ್ನು ತೆಗೆದುಕೊಂಡು ಅದರಲ್ಲಿ ಅತಿವೃಷ್ಟಿ ಮತ್ತು ಬರ ಪರಿಹಾರಕ್ಕೆ ಸಂಬಂಧಿಸಿ ಸರಾಸರಿ ಕ್ರೋಡೀಕರಿಸಿ ಪರಿಹಾರ ನೀಡುತ್ತದೆ. ಅಲ್ಲದೆ, ರೈತರು ನೀಡುವ ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ತೋಟಗಾರಿಕೆ ಅಧಿಕಾರಿ ದೋರೆ ರಾಜ್ ಮಾತನಾಡಿ, ಮಳೆ ಹೆಚ್ಚಾದರೆ, ಮಳೆ ಆಗದಿದ್ದರೆ, ಬಿಸಿಲ ಪ್ರಮಾಣ ಹೆಚ್ಚಾದರೆ ಅದನ್ನು ಆಧರಿಸಿ ಬೆಳೆಗಳಿಗೆ ಪರಿಹಾರ ನೀಡಲಾಗುತ್ತದೆ. ಇದಕ್ಕಾಗಿ ದತ್ತಾಂಶ ಸಂಗ್ರಹಿಸಲಾಗುತ್ತದೆ. ಆಧಾರ್ ಲಿಂಕ್ ಆಗದಿದ್ದರೆ ವಿಮೆ ಹಣ ಜಮಾ ಮಾಡಲು ತೊಂದರೆಯಾಗುತ್ತದೆ ಎಂದು ತಿಳಿಸಿದರು.
ದೇವರಾಜ್, ಶೇಖರಪ್ಪ ಗೌಡ, ಮಹೇಶ್, ಹಿರಿಯಣ್ಣಪ್ಪ, ವೀರಪ್ಪಗೌಡ, ರಾಜಶೇಖರ ಗೌಡ, ಬಂಗಾರಪ್ಪ, ಅಣ್ಣಾಜಿ ಗೌಡ, ಚಂದ್ರಪ್ಪ, ಬಂಗಾರಪ್ಪ, ಶಿವರಾಜ್, ಇಂದೂಧರ, ಪಾಲಾಕ್ಷಪ್ಪ ಗೌಡ, ಕೋಮಲಪ್ಪ, ಸಂದೀಪ್ ಇತರರಿದ್ದರು.

Share This Article

ಮನೆಯಲ್ಲಿಯೇ ಮಾಡಿ ರುಚಿಕರ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ತಯಾರಿಸುವ ವಿಧಾನ | Recipe

ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಆಹಾರದ ರುಚಿಯ ಜತೆಗೆ ಆರೋಗ್ಯಕವೂ ಆಗಿರುವ ಉಪ್ಪಿನಕಾಯಿ ಮಾಡಿದರೆ ಎಲ್ಲರೂ…

ಸಕ್ಕರೆ ಅಥವಾ ಬೆಲ್ಲ ಯಾವುದು ಉತ್ತಮ ಆರೋಗ್ಯಕ್ಕೆ ಒಳ್ಳೆಯದು; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ತೂಕವನ್ನು ಇಳಿಸಲು ಅಥವಾ ಆರೋಗ್ಯಕರ ಆಹಾರವನ್ನು ಸೇವಿಸುವ ವಿಷಯಕ್ಕೆ ಬಂದಾಗ ಆಹಾರದಿಂದ ಸಕ್ಕರೆಯನ್ನು ತೆಗೆದುಹಾಕುವುದು ಅಥವಾ…

ತೂಕ ಇಳಿಕೆ ನಿಂಬೆರಸ ಅತ್ಯುತ್ತಮ ಮನೆಮದ್ದು ಎಂಬುದು ಗೊತ್ತೆ; ಇಲ್ಲಿದೆ ಬಳಸುವ ಸರಿಯಾದ ವಿಧಾನ | Health Tips

ಪ್ರಸ್ತುತ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ಬೊಜ್ಜು ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದಾಗಿ…