ನಾಗಿಣಿಯ ರೀಲ್ ಆರತಕ್ಷತೆ; ಜೀ ಕನ್ನಡದಿಂದ ಹೀಗೊಂದು ಪ್ರಯತ್ನ

ಜೀ ಕನ್ನಡ ವಾಹಿನಿ ಇದೀಗ ವೀಕ್ಷಕರ ಮಧ್ಯದಲ್ಲೇ ವಿವಾಹ ಆರತಕ್ಷತೆ, ಅದ್ದೂರಿ ಭೋಜನ ಆಯೋಜಿಸಿ ಮತ್ತೊಂದು ಪ್ರಥಮಕ್ಕೆ ನಾಂದಿ ಹಾಡಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ರೀಲ್ ಆರತಕ್ಷತೆಯನ್ನು ರಿಯಲ್ ಜನರ ಮಧ್ಯದಲ್ಲಿ ಆಯೋಜಿಸಿದೆ. ದಾವಣಗೆರೆಯ ಜೀ ಕನ್ನಡ ವೀಕ್ಷಕರು ಆರತಕ್ಷತೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ತ್ರಿಶೂಲ್ ಮತ್ತು ಶಿವಾನಿ ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ‘ನಾಗಿಣಿ-2’ ಧಾರಾವಾಹಿ ಖ್ಯಾತಿಯ ತ್ರಿಶೂಲ್ ಮತ್ತು ಶಿವಾನಿ ವಿವಾಹದ ಆರತಕ್ಷತೆಯನ್ನು ದಾವಣಗೆರೆ ಜಿಲ್ಲೆಯಲ್ಲಿ ಸ್ಪರ್ಧೆಯ ಮೂಲಕ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ … Continue reading ನಾಗಿಣಿಯ ರೀಲ್ ಆರತಕ್ಷತೆ; ಜೀ ಕನ್ನಡದಿಂದ ಹೀಗೊಂದು ಪ್ರಯತ್ನ