ಗದಗ : ಯುವಕರು ಗಾಂಧಿಯವರ ವಿಚಾರಗಳನ್ನು ಅಳವಡಿಸಿಕೊಂಡು ದೇಶದ ಪರಿವರ್ತನೆಯ ಕಡೆಗೆ ಶ್ರಮಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರು ತಿಳಿಸಿದರು.
ನಗರದ ಆರ್ ಡಿ ಪಿ ಆರ್ ವಿಶ್ವವಿದ್ಯಾಲಯದ ಗ್ರಾಮ ಗಂಗೋತ್ರಿ ಕ್ಯಾಂಪಸ್ ನಲ್ಲಿ ಮಂಗಳವಾರ ರಾಜ್ಯ ಎನ್.ಎಸ್.ಎಸ್ ಕೋಶ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ರಾಷ್ಟಿçÃಯ ಸೇವಾ ಯೋಜನೆ ಸಹಯೋಗದಲ್ಲಿ 2024-25 ನೇ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ಹಾಗೂ ಗಾಂಧೀಜಿಯವರ ಮೂಲ ಕೃತಿಗಳ ಅನುವಾದಿತ ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗದಗ ಜಿಲ್ಲೆ ಸಂಗೀತ ಸಾಂಸ್ಕöÈತಿಕ ಸೇರಿದಂತೆ ಎಲ್ಲಾ ರಂಗಗಳಲ್ಲಿ ತನ್ನ ಚಾಪನ್ನು ಮೂಡಿಸಿದೆ. ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಸಹಕಾರ ಚಳುವಳಿಯ ಪರಿಕಲ್ಪನೆ ಹೊಂದಿ ಉದಯವಾಗಿದೆ. ದೇಶದಲ್ಲಿ ಸ್ವಾತಂತ್ರ ಹೋರಾಟ ನಿರ್ಮಾಣ ಮಾಡುವಲ್ಲಿ ಮುಂಬೈ ಪ್ರಾಂತ್ಯದಲ್ಲಿಯೇ ಗದದ ಜಿಲ್ಲೆಯು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು ಈ ಹಿಂದೆ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಕೇಂದ್ರ ಕಚೇರಿಯು ಗದಗನಲ್ಲಿ ನಾವೆಲ್ಲರೂ ಮರೆಯುವಂತಿಲ್ಲ. ಕನ್ನಡ ಸಾಹಿತ್ಯಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿರುವಂತಹ ಪಂಪ ರನ್ನ ಕುಮಾರವ್ಯಾಸ ಅತ್ತಿಮಬ್ಬೆ ಚಾಮರಸ ದುರ್ಗಸಿಂಹ ಅಬ್ಬಯಕ್ಕ ನಯಸೇನ ಇವರೆಲ್ಲರೂ ಗದಗ ಜಿಲ್ಲೆಯ ಕೊಡುಗೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಈಗಿನ ಆಧುನಿಕ ಸಾಹಿತ್ಯದಲ್ಲಿ ಆರ್ಸಿ ಹಿರೇಮಠ್ ಚನ್ನವೀರ್ ಕಣವಿ,ಗಿರಡ್ಡಿ ಗೋವಿಂದರಾಜು ಸೋಮಶೇಖರ್ ಇಮ್ರಾಪುರ್,ಅಂದಾನಪ್ಪ ಮೇಟಿ ಹೀಗೆ ಹಲವರ ಕೊಡುಗೆ ಅಪಾರವಾದದ್ದಾಗಿದೆ ಎಂದರು.
ಗ್ರಾಮೀಣ ವ್ಯವಸ್ಥೆಯ ಆರ್ಥಿಕತೆ ಸೊರಗುತ್ತಿದೆ. ಹಳ್ಳಿಗಳಲ್ಲಿ ಎತ್ತುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವ್ಯವಸಾಯ ಮಾಡುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಎಲ್ಲರಿಗೂ ಆತಂಕ ತರುವ ವಿಷಯ. ಗಾಂಧಿಜಿಯವರ ಕನಸಿನಂತೆ ಗ್ರಾಮದ ಅಭಿವೃದ್ಧಿ ದೇಶದ ಅಭಿವೃದ್ಧಿಯಾಗಿದೆ. ಯುವಕರು ಕೆಲಸವನ್ನ ಆರಿಸಿ ನಗರಕ್ಕೆ ಹೋಗುತ್ತಿದ್ದಾರೆ ಇದರ ಬಗ್ಗೆ ಗಂಭೀರವಾದ ಚಿಂತನೆ ನಡೆಯಬೇಕಿದೆ ಎಂದರು.
ಮಹಾತ್ಮ ಗಾಂಧೀಜಿಯವರು ಹೇಳಿದಂತೆ ಶಾಂತಿ ಸಹನೆ ಪ್ರೀತಿ ಅಳವಡಿಸಿಕೊಂಡು ದ್ವೇಷ ಅಸೂಯೆಯನ್ನು ಮರೆತು ಒಳ್ಳೆಯ ಮನಸ್ಥಿತಿಯೊಂದಿಗೆ ದೇಶವನ್ನು ನಿರ್ಮಾಣ ಮಾಡುವುದು ಎಲ್ಲ ಯುವಕರ ಕರ್ತವ್ಯವಾಗಿದೆ. ದೇಶದಲ್ಲಿರುವ ಅನೇಕ ಜ್ವಲಂತ ಸಮಸ್ಯೆಗಳನ್ನು ಸವಾಲುಗಳಾಗಿ ತೆಗೆದುಕೊಂಡು ಯುವಕರು ಕ್ರಾಂತಿಯ ಕಹಳೆಯನ್ನು ಓದಿ ಪರಿವರ್ತನೆಯ ರಾಷ್ಟç ನಿರ್ಮಾಣದಲ್ಲಿ ಒಮ್ಮತದಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಅವರು ತಿಳಿಸಿದರು.
ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ವಿ ಆರ್ ಸುದರ್ಶನ್ ಅವರು ಮಾತನಾಡಿ ಎನ್ಎಸ್ಎಸ್ ಮತ್ತು ಎನ್ ಸಿ ಸಿ ಅಂತ ತರಬೇತಿಗಳು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅತ್ಯುತ್ತಮ ವ್ಯಕ್ತಿತ್ವ ಹೊಂದುವAತಹ ವಿದ್ಯಾರ್ಥಿಯನ್ನಾಗಿ ತಯಾರು ಮಾಡುತ್ತವೆ ಹಾಗಾಗಿ ಈಗಿನ ಈ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವನ್ನು ನೀಡಿದ ಹೊರತು ಅವರಿಗೆ ಉತ್ತಮ ವ್ಯಕ್ತಿತ್ವವನ್ನು ತಯಾರು ಮಾಡುವಲ್ಲಿ ವಿಶ್ವವಿದ್ಯಾಲಯಗಳು ಶ್ರಮಿಸಬೇಕು ಎಂದು ಹೇಳಿದರು
ಯುವಕರು ದೇಶದ ಭವಿಷ್ಯ ನಿರ್ಮಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಾರೆ ಹಾಗಾಗಿ ಅವರು ಕೇವಲ ತಮ್ಮ ಹಕ್ಕುಗಳನ್ನು ಕೇಳದೆ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ದೇಶ ನಿರ್ಮಾಣದಲ್ಲಿ ಹಕ್ಕುಗಳಿಗೆ ನೀಡುವ ಪ್ರಾಮುಖ್ಯತೆಯನ್ನೇ ತಮ್ಮ ಜವಾಬ್ದಾರಿಗಳಿಗೂ ನೀಡಬೇಕು ಅಂದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಹೇಳಿದರು
ವಿವಿಧ ಸ್ಥಳಗಳಿಂದ ಆಗಮಿಸಿದಂತಹ ಎನ್ಎಸ್ಎಸ್ ಮತ್ತು ಎನ್ಸಿಸಿ ವಿದ್ಯಾರ್ಥಿಗಳು ಗದಗ ಜಿಲ್ಲೆಯ ವೈಶಿಷ್ಟ÷್ಯ ಇತಿಹಾಸವನ್ನು ತಿಳಿದುಕೊಳ್ಳಬೇಕು ಗದಗ ಜಿಲ್ಲೆ, ಕರ್ನಾಟಕ ರಾಜ್ಯಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ನೀಡಿದೆ. ಅದನ್ನೆಲ್ಲರೂ ನಾವು ನೆನಪಿಸಿಕೊಳ್ಳಬೇಕು, ಜಿಲ್ಲೆಯ ಅಭಿವೃದ್ಧಿಗೆ ದಿವಂಗತ ಕೆ ಹೆಚ್ ಪಾಟೀಲರು ಹಾಗೂ ಎಚ್ ಕೆ ಪಾಟೀಲರ ಕೊಡುಗೆಯು ಜಿಲ್ಲೆಯ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು .
ಹಳೆ ಮೈಸೂರು ಭಾಗದಲ್ಲಿ ಹಾಲು ಉತ್ಪಾದಕರ ಸಂಘ ತುಂಬಾ ಹೆಚ್ಚಾಗಿದ್ದು ಅದೇ ರೀತಿ ಉತ್ತರ ಕರ್ನಾಟಕ ಭಾಗದಲ್ಲಿಯೂ ಹಸುವನ್ನ ಸಾಕಿ ಹಾಲು ಉತ್ಪಾದನೆ ಮಾಡುವ ಮೂಲಕ ಗ್ರಾಮೀಣದಲ್ಲಿ ಉತ್ತಮ ಆರ್ಥಿಕ ಬೆಳವಣಿಗೆಯನ್ನು ಕಾಣಬಹುದಾಗಿದೆ. ರಾಜ್ಯ ಮತ್ತು ರಾಷ್ಟçದಲ್ಲಿಯೇ ಒಂದು ಹಳ್ಳಿಯು ತನಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ ಎಂದರೆ ಅದು ಗದಗ್ ಜಿಲ್ಲೆಯ ಹುಲಕೋಟಿ ಗ್ರಾಮವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಯ ಅಂಗೈಯಲ್ಲಿ ಇಡೀ ಪ್ರಪಂಚದ ಮಾಹಿತಿ ಇದೆ ಹಾಗಾಗಿ ಒಂದು ವಿಷಯದ ಕುರಿತು ಶ್ರದ್ಧೆಯನ್ನು ಬಿಟ್ಟು ಆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಶಿಸ್ತಿನಿಂದ ಕ್ರಮವಹಿಸಿದಾಗ ಎಂತಹ ಕೆಲಸವು ಅಸಾಧ್ಯ ವಾಗದು ಹಾಗಾಗಿ ಆ ನಿಟ್ಟಿನೊಳಗಡೆ ಎಲ್ಲರೂ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕುಲಪತಿ (ಪ್ರ) ಕುಲಸಚಿವರಾದ ಪ್ರೊ.ಡಾ.ಸುರೇಶ ನಾಡಗೌಡರ,ಡಿ ಜೀವನಕುಮಾರ, ಡಾ.ಮೀನಾ ದೇಶಪಾಂಡೆ, ಪ್ರಶಾಂತ ಮೇರವಾಡೆ,ಡಾ.ಅಬ್ದುಲ್ ಮುಲ್ಲಾ ಸೇರಿದಂತೆ ಎನ್.ಸಿಸಿ ಎನ್ ಎಸ್ ಎಸ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಪ್ರಕಾಶ ಮಾಚೇನಹಳ್ಳಿ ನಿರ್ವಹಿಸಿದರು.
TAGGED:*ಗದಗ