More

    ಉದ್ಯೋಗ ಹುಡುಕುವ ಬದಲು ನೀವೇ ಸೃಷ್ಠಿಸಿಕೊಳ್ಳಿ

    ರಾಣೆಬೆನ್ನೂರ: ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಸ್ವ ಉದ್ಯೋಗವನ್ನು ಕಲಿತು ನೀವೇ ನೌಕರಿ ಸೃಷ್ಠಿ ಮಾಡುವ ಹಾಗೆ ತಯಾರಿ ಆಗಬೇಕು ಎಂದು ಆರ್‌ಟಿಇಎಸ್ ಕಾಲೇಜ್‌ನ ಆಡಳಿತ ಮಂಡಳಿ ಕಾರ್ಯದರ್ಶಿ ಸೀತಾ ಕೋಟಿ ಹೇಳಿದರು.
    ಸ್ಥಳೀಯ ಆರ್‌ಟಿಇಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಹಾಗೂ ಜೆಸಿಐ ಸಂಸ್ಥೆ ವತಿಯಿಂದ ಬುಧವಾರ ಏರ್ಪಡಿಸಿದ್ದ ವ್ಯವಹಾರಿಕ ಜ್ಞಾನ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಜೆಸಿಐ ವಲಯ ತರಬೇತಿದಾರ ಪ್ರಭುಲಿಂಗಪ್ಪ ಹಲಗೇರಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಆಧುನಿಕತೆಗೆ ತಕ್ಕಂತೆ ಸ್ವ ಉದ್ಯೋಗದಲ್ಲಿ ತರಬೇತಿ ಪಡೆದು ಇಂದಿನ ಯುವಜನತೆ ನೌಕರಿಯನ್ನು ನಂಬುವುದಕ್ಕಿಂತ ಸ್ವತಃ ಉದ್ಯೋಗ ಮಾಡುವುದು ಬಹಳ ಉತ್ತಮ ಎಂದರು.
    ಪ್ರಾಚಾರ್ಯ ಸಿ.ಎ. ಹರಿಹರ ಅಧ್ಯಕ್ಷತೆ ವಹಿಸಿದ್ದರು.
    ಜೆಸಿಐ ಅಧ್ಯಕ್ಷೆ ಲಕ್ಷ್ಮೀ ಅಡಿಕೆ, ಎಚ್.ಎನ್. ದೇವಕುಮಾರ, ಶರತಗೌಡ ಎಡಚಿ, ಡಾ. ಸರಸ್ವತಿ ಬಮ್ಮನಾಳ, ಮಂಜುನಾಥ ಗೋಂದಕರ, ರೇಖಾ ಪಲ್ಲೇದ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts