ಹಾವು ಕಚ್ಚಿ ಮಹಿಳೆ ಸಾವು: ಸರಿಯಾದ ಸಮಯಕ್ಕೆ ವೈದ್ಯರು ಸಿಗದೇ ಮಹಿಳೆಯ ದುರಂತ ಅಂತ್ಯ

ರಾಮನಗರ: ಕೈಲಾಂಚ ಹೋಬಳಿಯ ನಾಗೋಹಳ್ಳಿ ಗ್ರಾಮದಲ್ಲಿ ಹಾವು ಕಚ್ಚಿ ಆಶಾ ರಾಣಿ (33) ಎಂಬ ಮಹಿಳೆ ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಮನೆ ಹಿತ್ತಲಿನಲ್ಲಿ ತೋಟದ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಿಷದ ಹಾವು ಕಚ್ಚಿದೆ. ಈ ವೇಳೆ ನೋವು ಭಯದಿಂದ ಕಿರುಚಿ ಹಿತ್ತಲಿನಿಂದ ಮನೆ ಮುಂಭಾಗಕ್ಕೆ ಆಶಾರಾಣಿ ಓಡಿ ಬಂದಿದ್ದಾರೆ. ಕೂಡಲೇ ಅಕ್ಕಪಕ್ಕದ ಜನರು ವಾಹನದಲ್ಲಿ ಕೈಲಾಂಚ ಆಸ್ಪತ್ರೆಯತ್ತ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಸಿಗದ ಹಿನ್ನಲೆಯಲ್ಲಿ ರಾಮನಗರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತರಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ … Continue reading ಹಾವು ಕಚ್ಚಿ ಮಹಿಳೆ ಸಾವು: ಸರಿಯಾದ ಸಮಯಕ್ಕೆ ವೈದ್ಯರು ಸಿಗದೇ ಮಹಿಳೆಯ ದುರಂತ ಅಂತ್ಯ