More

    ಯಾರೂ ಗನ್​ ಇಟ್ಟು ಕೆಲಸ ಮಾಡಿಸುವುದಿಲ್ಲ … ರಾಜ್​ ಪರವಾಗಿ ನಿಂತ ರಾಖಿ

    ಮುಂಬೈ: ಮಾಡೆಲ್​ಗಳನ್ನು ಬಳಸಿಕೊಂಡು ಅಶ್ಲೀಲ ವಿಡಿಯೋಗಳ ನಿರ್ಮಿಸಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾಗೆ 14 ದಿನ ಕಾಲ ನ್ಯಾಯಾಂಗ ಬಂಧನ ವಿಧಿಸಿ ಮುಂಬೈನ ಕಿಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಐಷಾರಾಮಿ ಕಾರಿಗೆ ತೆರಿಗೆ ಕಟ್ಟದೇ ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದ ನಟನೀಗ ಸ್ವಲ್ಪ ನಿರಾಳ

    ಕಳೆದ ವಾರ ರಾಜ್​ ಬಂಧನವಾದ ನಂತರ ಆತನ ಪರವಾಗಿ ಮಾತನಾಡಿದ ಮೊದಲಿಗರೆಂದರೆ ಅದು ರಾಖಿ ಸಾವಂತ್​​. ಈಗಲೂ ರಾಜ್​ ಪರವಾಗಿ ನಿಂತಿರುವ ರಾಖಿ, ಯಾರೂ ಸಹ ಯಾರಿಂದಲೂ ಒತ್ತಾಯಪೂರ್ವಕವಾಗಿ ಈ ತರಹದ ಚಿತ್ರಗಳನ್ನು ಮಾಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಆಗಸ್ಟ್​ 01ಕ್ಕೆ ‘ಆರ್​ಆರ್​ಆರ್​’ ಚಿತ್ರದ ಮೊದಲ ಹಾಡು ಬಿಡುಗಡೆ …

    ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನಾನು ಯಾರ ಪರವಾಗಿಯೂ ಇಲ್ಲ, ಯಾರ ವಿರುದ್ಧವಾಗಿಯೂ ಇಲ್ಲ. ಯಾರೂ ಸಹ ಇನ್ನೊಬ್ಬರ ತಲೆಯ ಮೇಲೆ ಗನ್​ ಇಟ್ಟು ಅಶ್ಲೀಲ ಚಿತ್ರಗಳನ್ನು ಮಾಡಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ಯಾರನ್ನೂ ದೂಷಿಸಬೇಡಿ. ನೀವು ಏನು ಕೊಡುತ್ತೀರೋ, ಅದನ್ನು ಜನ ತೆಗೆದುಕೊಳ್ಳುತ್ತಾರೆ. ಯಾರೂ ಸಹ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸುವುದಕ್ಕೆ ಸಾಧ್ಯವಿಲ್ಲ. ಇದೊಂಉ ಸ್ವತಂತ್ರ ದೇಶ ಮತ್ತು ಜನ ಇಲ್ಲಿ ಎಲ್ಲಾ ತರಹದ ಕೆಲಸಗಳನ್ನೂ ಮಾಡುತ್ತಾರೆ. ಈ ತರಹ ಚಿತ್ರಗಳನ್ನು ಇನ್ನೂ ಎಷ್ಟೋ ಜನ ಮಾಡುತ್ತಾರೆ. ಆದರೆ, ರಾಜ್​ ಕುಂದ್ರಾ ಮಾತ್ರ ಯಾಕೆ ಟಾರ್ಗೆಟ್​ ಆಗುತ್ತಿದ್ದಾರೆ? ಬಹುಶಃ ಅವರು ಶಿಲ್ಪಾ ಶೆಟ್ಟಿ ಗಂಡ ಎಂಬ ಕಾರಣಕ್ಕೆ ಮತ್ತು ಒಬ್ಬ ಸೆಲೆಬ್ರಿಟಿಯಾಗಿರುವುದಕ್ಕೆ ಎಲ್ಲರೂ ಅವರನ್ನು ಟಾರ್ಗೆಟ್​ ಮಾಡುತ್ತಿರಬಹುದು. ಹಾಗಂತ ಅವರು ಮುಗ್ಧ ಎಂದು ಹೇಳುತ್ತಿಲ್ಲ’ ಎನ್ನುತ್ತಾರೆ ರಾಖಿ.

    ನಮಗೆ ಏನು ಕಡಿಮೆ ಆಗಿತ್ತು? ಪತಿಯನ್ನು ತರಾಟೆಗೆ ತೆಗೆದುಕೊಂಡರಂತೆ ಶಿಲ್ಪಾ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts