blank

Raju James Bond Review ; ಜೇಮ್ಸ್​ ಬಾಂಡ್​ ಆದ ಕಿಲಾಡಿ ರಾಜು

blank

|ಹರ್ಷವರ್ಧನ್​ ಬ್ಯಾಡನೂರು

ಚಿತ್ರ: ರಾಜು ಜೇಮ್ಸ್​ ಬಾಂಡ್​
ನಿರ್ದೇಶನ: ದೀಪಕ್​ ಮಧುವನಹಳ್ಳಿ
ನಿರ್ಮಾಣ: ಕಿರಣ್​ ಮತ್ತು ಮಂಜುನಾಥ್​
ತಾರಾಗಣ: ಗುರುನಂದನ್​, ಮೃದುಲ, ಚಿಕ್ಕಣ್ಣ, ಅಚ್ಯುತ್​ ಕುಮಾರ್​, ಸಾಧು ಕೋಕಿಲ, ರವಿಶಂಕರ್​, ತಬಲಾ ನಾಣಿ ಮತ್ತಿತರರು.

Raju James Bond Review ; ಜೇಮ್ಸ್​ ಬಾಂಡ್​ ಆದ ಕಿಲಾಡಿ ರಾಜು

“ಫಸ್ಟ್​ ರ್ಯಾಂಕ್​ ರಾಜು’, “ರಾಜು ಕನ್ನಡ ಮೀಡಿಯಂ’ ಖ್ಯಾತಿಯ ಗುರುನಂದನ್​ ಮೂರನೇ ಬಾರಿಗೆ ರಾಜು ಆಗಿರುವ ಚಿತ್ರ “ರಾಜು ಜೇಮ್ಸ್​ ಬಾಂಡ್​’. ದೀಪಕ್​ ಮಧುವನಹಳ್ಳಿ ನಿರ್ದೇಶನದ ಈ ಆ್ಯಕ್ಷನ್​ ರೊಮ್ಯಾಂಟಿಕ್​ ಕಾಮಿಡಿಯಲ್ಲಿ ಗುರು ಮೊದಲ ಬಾರಿಗೆ ಮಾಸ್​ ಅವತಾರದಲ್ಲಿ ಮಿಂಚಿದ್ದಾರೆ. ಈ ಬಾರಿ ಕೊಂಚ ಹೆಚ್ಚೇ ದೇಹ ದಂಡಿಸಿರುವ ಅವರು ಡಾನ್ಸ್​, ಫೈಟ್ಸ್​​ಗಳಲ್ಲೂ ಗಮನ ಸೆಳೆಯುತ್ತಾರೆ.

Raju James Bond Review ; ಜೇಮ್ಸ್​ ಬಾಂಡ್​ ಆದ ಕಿಲಾಡಿ ರಾಜು

ಸುವರ್ಣಾಪುರದ ಎಂಎಲ್​ಎ ಭೂತಯ್ಯ (ರವಿಶಂಕರ್​), “ನೂರೋ, ಇನ್ನೂರೋ ಆಗಿದ್ರೆ ಬಿಟ್ಬಿಡ್ತಿದ್ದೆ. ಐದೋ, ಹತ್ತೋ ಸಾವಿರ ಆಗಿದ್ರೆ ಕೊಟ್ಬಿಡ್ತಿದ್ದೆ. ಕೋಟಿ, ಕೋಟಿ ಕಣ್ರೋ… 25 ಕೋಟಿ. ಬಿಡೋಕ್ಕಾಗುತ್ತಾ? ಕೊಡೋಕ್ಕಾಗುತ್ತಾ?’ ಎಂದು ಕಿರುಚಾಡುತ್ತಾನೆ. ನಿಮ್ದೇ ಬ್ಯಾಂಕ್​ನಲ್ಲಿ ಆತ ಅಕ್ರಮವಾಗಿ ಕೂಡಿಟ್ಟಿದ್ದ 25 ಕೋಟಿ ದರೋಡೆಯಾಗಿರುವುದೇ ಅದಕ್ಕೆ ಕಾರಣ. ಆ ದರೋಡೆಗೆ ಕಾರಣ ಯಾರು? ಯಾಕೆ ದುಡ್ಡು ಕದ್ದಿರುತ್ತಾರೆ? ಭೂತಯ್ಯನಿಗೆ ಮತ್ತೆ ಹಣ ಸಿಗುತ್ತಾ? ಕಳ್ಳತನವಾದ ಹಣ ಏನಾಗುತ್ತೆ? ಎಂಬುದರ ಸುತ್ತ “ರಾಜು ಜೇಮ್ಸ್​ ಬಾಂಡ್​’ ಕಥೆ ಸಾಗುತ್ತದೆ.

Raju James Bond Review ; ಜೇಮ್ಸ್​ ಬಾಂಡ್​ ಆದ ಕಿಲಾಡಿ ರಾಜು

ಟಿಆರ್​ಪಿ ಅರ್ಥಾತ್​ ಟಿಆರ್​ ಪರಮೇಶ್​ ಎಂಬ ನಿರೂಪಕನಾಗಿ ಚಿಕ್ಕಣ್ಣ, ರಾರಾ ಶಾಕಿಂಗ್​ ಎಲೆಕ್ಟ್ರಿಕಲ್ಸ್​ ಮಾಲೀಕ ರಾಮಕೃಷ್ಣನ ಪಾತ್ರದಲ್ಲಿ ಅಚ್ಯುತ್​ ಕುಮಾರ್​, ಅಮಲೇಶ್ವರಿ ಬಾರ್​ ಆ್ಯಂಡ್​ ರೆಸ್ಟೋರೆಂಟ್​, ಬಾಲಬ್ರಹ್ಮಚಾರಿ ಶ್ರೀ ವಿಲಾಸಾನಂದ ಎಂಬ ಜ್ಯೋತಿಷಿಯಾಗಿ ತಬಲಾ ನಾಣಿ, ವೃತ್ತಿಪರ ಕಳ್ಳ ತೆನಾಲಿ ಪಾತ್ರದಲ್ಲಿ ಸಾಧು ಕೋಕಿಲ, ಎಂಎಲ್​ಎ ಭೂತಯ್ಯನಾಗಿ ರವಿಶಂಕರ್​ ನಟಿಸಿದ್ದು ಅವರ ಪಾತ್ರಗಳ ವಿಭಿನ್ನ ಹೆಸರು ಮಾತ್ರವಲ್ಲದೇ, ಕಾಮಿಡಿ ಟೈಮಿಂಗ್​ ಮತ್ತು ಒನ್​ಲೈನರ್​ಗಳ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾರೆ. ಚೊಚ್ಚಲ ಚಿತ್ರದಲ್ಲೇ ನಾಯಕಿ ಮೃದುಲ ವಿದ್ಯಾ ಟೀಚರ್​ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಕೆಲವೆಡೆ ಡಬಲ್​ ಮೀನಿಂಗ್​ ಅನ್ನಿಸಿದರೂ, ಕಾಮಿಡಿ ಚೆನ್ನಾಗಿ ಕೆಲಸ ಮಾಡಿದೆ. ಅನೂಪ್​ ಸೀಳಿನ್​ ಸಂಗೀತದಲ್ಲಿ “ಕಣ್ಮಣಿ’ ಹಾಡು ಕೇಳಲು, ನೋಡಲು ಅಂದವಾಗಿದೆ. “ಜೇಮ್ಸ್​ ಬಾಂಡ್​’ ಶೀರ್ಷಿಕೆಗೆ ತಕ್ಕಂತೆ ಇನ್ನೊಂದಿಷ್ಟು ಥ್ರಿಲ್ಲಿಂಗ್​, ಸಸ್ಪೆನ್ಸ್​ ಅಂಶಗಳಿದ್ದರೆ ಸಿನಿಮಾ ಪ್ರೇಕ್ಷಕರನ್ನು ಮತ್ತಷ್ಟು ಸೀಟಂಚಲ್ಲಿ ಕೂರಿಸುವ ಅವಕಾಶವಿತ್ತು. ಆದರೂ, ಕೆಲ ಕಾಲ ನಕ್ಕು ಎಂಜಾಯ್​ ಮಾಡಲು “ರಾಜು ಜೇಮ್ಸ್​ ಬಾಂಡ್​’ ಮೋಸ ಮಾಡುವುದಿಲ್ಲ.

Share This Article

ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಭಾನುವಾರ ಹೀಗೆ ಮಾಡಿ ನೋಡಿ…devotional

devotional:ಭಾನುವಾರ ಸೂರ್ಯ ದೇವನನ್ನು ಪೂಜೆ ಮಾಡುವುದರಿಂದ ಮತ್ತು ಸೂರ್ಯ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ…

ಸುಡು ಬೇಸಿಗೆಯಲ್ಲಿ ಆರೋಗ್ಯ ನಿಮ್ಮ ಕೈಯಲ್ಲಿ! ಈ ಟಿಪ್ಸ್​ ತಪ್ಪದೇ ಫಾಲೋ ಮಾಡಿ, ಇಲ್ಲದಿದ್ರೆ ಆರೋಗ್ಯಕ್ಕೆ ಡೇಂಜರ್​ | Summer Tips

Summer Tips : ಎಲ್ಲೆಡೆ ಬೇಸಿಗೆ ಆರಂಭವಾಗಿದೆ. ಸೂರ್ಯನ ಪ್ರಖರವಾದ ಕಿರಣಗಳು ನಮ್ಮ ನೆತ್ತಿಯನ್ನು ಸುಡುತ್ತಿದೆ.…

ಈ 3 ರಾಶಿಯವರು ಹಣಕ್ಕಿಂತಲೂ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…