More

    ಸಿಎಎ ಬೆಂಬಲಿಸಿ ಪತ್ರ ಚಳವಳಿ

    ರಬಕವಿ/ಬನಹಟ್ಟಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ತೇರದಾಳ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ವತಿಯಿಂದ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುತ್ತೇವೆ. ಅಲ್ಲದೆ, ವಿವಿಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ಬನಹಟ್ಟಿ ನಗರದ ಎಂ.ಎಂ. ಬಂಗ್ಲೆ ಹತ್ತಿರ ಮಂಗಳವಾರ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಪತ್ರ ಚಳವಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಯ್ದೆಗೆ ಬೆಂಬಲಿಸಿ ಟ್ವೀಟ್ ಮಾಡುವ ಕೆಲಸ ಈಗಾಗಲೇ ನಮ್ಮ ಕಾರ್ಯಕರ್ತರು ಮಾಡುತ್ತಿದ್ದಾರೆ. ಐ ಸಪೋರ್ಟ್ ಸಿಎಎ ಎಂಬ ವಾಕ್ಯದೊಂದಿಗೆ ಮೋದಿ ಮತ್ತು ಅಮಿತ್ ಷಾ ಅವರಿಗೆ ಬೆಂಬಲಾರ್ಥವಾಗಿ ಪತ್ರ ಚಳವಳಿಯನ್ನು ಕ್ಷೇತ್ರಾದ್ಯಂತ ಆರಂಭಿಸಿದ್ದೇವೆ ಎಂದರು.

    ಜ.13 ರಂದು ಕಾಯ್ದೆ ಬೆಂಬಲಿಸಿ ಬೃಹತ್ ಮೆರವಣಿಗೆ, ಸಾರ್ವಜನಿಕ ಸಭೆ ನಡೆಸಿ ಜಾಗೃತಿ ಮೂಡಿಸಲಾಗುವುದು ಎಂದರು. ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಭೀಮಸಿ ಮಗದುಮ, ಶಿವಾನಂದ ಗಾಯಕವಾಡ, ಸದಾಶಿವ ತಟಕೋಟ, ಶಿವು ಗುಂಡಿ, ಶಿವಾನಂದ ಕಾಗಿ, ಶೇಖರ ಹಕಲದಡ್ಡಿ, ಅಶೋಕ ರಾವಳ, ಶಿವಾನಂದ ಬುದ್ನಿ, ರವಿ ಚನಪನ್ನವರ, ರಾಚು ಶೀರೋಳ, ಗೌರಿ ಮಿಳ್ಳಿ, ದುರ್ಗವ್ವ ಹರಿಜನ, ಗಂಗಪ್ಪ ಉಳ್ಳಾಗಡ್ಡಿ, ಚನ್ನು ಮಾಲಾಪುರ, ರವಿ ಕೊರ್ತಿ, ಶ್ರೀನಿವಾಸ ಹಳ್ಯಾಳ, ಸದಾಶಿವ ಗಾಯಕವಾಡ, ಎಸ್.ಎಸ್. ಷಣ್ಮುಖ ಇತರರು ಇದ್ದರು.

    ವಿರೋಧ ಪಕ್ಷಗಳು ದುರುದ್ದೇಶದಿಂದ ಸುಳ್ಳು ಸುದ್ದಿ ಹರಡುತ್ತಿವೆ. ಸಿಎಎಯಿಂದ ಯಾವುದೇ ಜಾತಿ, ಧರ್ಮಕ್ಕೆ ಸೇರಿದ ವ್ಯಕ್ತಿ ತೊಂದರೆಯಾಗುವುದಿಲ್ಲ. ಯಾರ ನಾಗರಿಕತ್ವವನ್ನು ಕಿತ್ತುಕೊಳ್ಳುವುದಿಲ್ಲ.
    – ಸಿದ್ದು ಸವದಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts