ರೈತನ ಭಾವನೆಗೆ ಸ್ಪಂದಿಸಿ 1.5 ಕೋಟಿ ರೂ. ಮೌಲ್ಯದ ಮನೆಯನ್ನು 500 ಅಡಿ ದೂರಕ್ಕೆ ಜರುಗಿಸುತ್ತಿದೆ ಸರ್ಕಾರ!

ಸಂಗ್ರೂರ್​: ಹೆದ್ದಾರಿ ನಿರ್ಮಾಣದ ಅನುಕೂಲಕ್ಕಾಗಿ ಪಂಜಾಬ್​ನ ಸಂಗ್ರೂರ್​ ಮೂಲದ ರೈತರೊಬ್ಬರ 1.5 ಕೋಟಿ ರೂಪಾಯಿ ಬೆಲೆ ಬಾಳುವ ಎರಡು ಅಂತಸ್ತಿನ ಮನೆಯನ್ನು 500 ಅಡಿ ದೂರಕ್ಕೆ ಸ್ಥಳಾಂತರ ಮಾಡುತ್ತಿರುವ ಅಪರೂಪದ ಪ್ರಕರಣ ಶನಿವಾರ ವರದಿಯಾಗಿದೆ. ಸಂಗ್ರೂರ್​ನ ರೋಶನ್​ವಾಲಾ ಗ್ರಾಮದ ರೈತ ಸುಖ್ವಿಂದರ್​ ಸಿಂಗ್​ ಸುಖಿ ತನ್ನ ಹೊಲದಲ್ಲ ತಮ್ಮ ಕನಸಿನ ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಅದೇ ಜಾಗದಲ್ಲಿ ದೆಹಲಿ-ಅಮೃತಸರ-ಕಾತ್ರಾ ಹೆದ್ದಾರಿಯು ಹರಿಯಾಣ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಮೂಲಕ ಹಾದುಹೋಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. … Continue reading ರೈತನ ಭಾವನೆಗೆ ಸ್ಪಂದಿಸಿ 1.5 ಕೋಟಿ ರೂ. ಮೌಲ್ಯದ ಮನೆಯನ್ನು 500 ಅಡಿ ದೂರಕ್ಕೆ ಜರುಗಿಸುತ್ತಿದೆ ಸರ್ಕಾರ!