ರೈತನ ಭಾವನೆಗೆ ಸ್ಪಂದಿಸಿ 1.5 ಕೋಟಿ ರೂ. ಮೌಲ್ಯದ ಮನೆಯನ್ನು 500 ಅಡಿ ದೂರಕ್ಕೆ ಜರುಗಿಸುತ್ತಿದೆ ಸರ್ಕಾರ!
ಸಂಗ್ರೂರ್: ಹೆದ್ದಾರಿ ನಿರ್ಮಾಣದ ಅನುಕೂಲಕ್ಕಾಗಿ ಪಂಜಾಬ್ನ ಸಂಗ್ರೂರ್ ಮೂಲದ ರೈತರೊಬ್ಬರ 1.5 ಕೋಟಿ ರೂಪಾಯಿ ಬೆಲೆ ಬಾಳುವ ಎರಡು ಅಂತಸ್ತಿನ ಮನೆಯನ್ನು 500 ಅಡಿ ದೂರಕ್ಕೆ ಸ್ಥಳಾಂತರ ಮಾಡುತ್ತಿರುವ ಅಪರೂಪದ ಪ್ರಕರಣ ಶನಿವಾರ ವರದಿಯಾಗಿದೆ. ಸಂಗ್ರೂರ್ನ ರೋಶನ್ವಾಲಾ ಗ್ರಾಮದ ರೈತ ಸುಖ್ವಿಂದರ್ ಸಿಂಗ್ ಸುಖಿ ತನ್ನ ಹೊಲದಲ್ಲ ತಮ್ಮ ಕನಸಿನ ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಅದೇ ಜಾಗದಲ್ಲಿ ದೆಹಲಿ-ಅಮೃತಸರ-ಕಾತ್ರಾ ಹೆದ್ದಾರಿಯು ಹರಿಯಾಣ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಮೂಲಕ ಹಾದುಹೋಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. … Continue reading ರೈತನ ಭಾವನೆಗೆ ಸ್ಪಂದಿಸಿ 1.5 ಕೋಟಿ ರೂ. ಮೌಲ್ಯದ ಮನೆಯನ್ನು 500 ಅಡಿ ದೂರಕ್ಕೆ ಜರುಗಿಸುತ್ತಿದೆ ಸರ್ಕಾರ!
Copy and paste this URL into your WordPress site to embed
Copy and paste this code into your site to embed