ವಿಜಯವಾಡ: ಭಾರತ ಹಿಂದೆಂದು ಕಾಣದಂತಹ ಕಠೋರ ಪರಿಸ್ಥಿತಿಯನ್ನು ಮಹಾಮಾರಿ ಕರೊನಾ ವೈರಸ್ ತಂದಿಟ್ಟಿದೆ. ದೇಶದ ಬಹುತೇಕ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರೇ ತುಂಬಿಕೊಂಡಿರುವುದರಿಂದ ಯಾರು ಎದುರು ನೋಡದ ಸನ್ನಿವೇಶಗಳೆಲ್ಲ ಕಣ್ಣ ಮುಂದೆಯೇ ನಡೆಯುತ್ತಿದೆ.
ಕರೊನಾದಿಂದಾಗಿ ಆಂಬುಲೆನ್ಸ್ ಸೌಲಭ್ಯ ಇಲ್ಲದಿರುವುದರಿಂದ ಕುಟುಂಬವೊಂದು ಮಹಿಳೆಯ ಮೃತದೇಹವನ್ನು ಬೈಕ್ ಮೇಲೆ ಹಾಕಿಕೊಂಡು ಹೋಗಿ ಶವಸಂಸ್ಕಾರ ಮಾಡಿರುವಂತಹ ಮನಕಲುಕುವ ಘಟನೆ ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ನಡೆದಿದೆ.
ಮೃತ ಮಹಿಳೆಯ ವಯಸ್ಸು 50 ಎಂದು ಅಂದಾಜಿಸಲಾಗಿದೆ. ಮಹಿಳೆ ಕೋವಿಡ್ ರೋಗ ಲಕ್ಷಣಗಳಿಂದ ಬಳಲುತ್ತಿದ್ದಳು. ಪರೀಕ್ಷೆಯು ಸಹ ಮಾಡಿಸಲಾಗಿತ್ತು. ಆದರೆ, ಪರೀಕ್ಷಾ ವರದಿ ಬರುವ ಮುನ್ನವೇ ಮಹಿಳೆ ತೀರಿಕೊಂಡಿದ್ದಾಳೆ. ಮೃತ ಮಹಿಳೆ ಶ್ರೀಕಾಕುಳಂನ ಮಂದಾಸಾ ಮಂಡಲದಲ್ಲಿರುವ ಗ್ರಾಮದವಳು. ಸೋಮವಾರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿ ಮೃತಪಟ್ಟಿದ್ದಳು.
ಆಂಬುಲೆನ್ಸ್ ಸಿಗುವ ಭರವಸೆಯ ಮೇಲೆ ಮೃತದೇಹವನ್ನು ಕುಟುಂಬದವರು ಆಸ್ಪತ್ರೆಯಲ್ಲೇ ಇಟ್ಟುಕೊಂಡು ಕಾಯುತ್ತಿದ್ದರು. ಆದರೆ, ಯಾವುದೇ ಆಂಬುಲೆನ್ಸ್ ಸಿಗದಿದ್ದಾಗ ಬೈಕ್ ಮೇಲೆಯೇ ಹೆಣವನ್ನು ಸಾಗಿಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ. (ಏಜೆನ್ಸೀಸ್)
ಇದು ‘ಪಾಸಿಟಿವ್’ ಸಪ್ತಪದಿ: ಕರೊನಾ ಬಂದರೂ ಡೋಂಟ್ ಕೇರ್- ನಡೆಯಿತು ಹೀಗೊಂದು ಮದುವೆ…
ಸಿನಿಮಾ ಚಿತ್ರೀಕರಣಕ್ಕೆ ಗ್ರಹಣ: ಕೋಟ್ಯಂತರ ರೂ. ಹೂಡಿಕೆ ಮಾಡಿದವರಿಗೆ ನಷ್ಟದ ಭೀತಿ
ನಗರವನ್ನೇ ಬೆಚ್ಚಿಬೀಳಿಸಿದ ನಾಲ್ವರು ಮಹಿಳೆಯರ ದಿಢೀರ್ ನಾಪತ್ತೆ! ಒಂದೊಂದು ಪ್ರಕರಣವೂ ವಿಭಿನ್ನ