ಬೆಳ್ಳಂಬೆಳಗ್ಗೆ ಹಾಸನದ ಹಲವೆಡೆ ಕಂಪಿಸಿದ ಭೂಮಿ: ಭೂಕಂಪನ ದೃಢಪಡಿಸಿದ ಅಧಿಕಾರಿಗಳು
ಹಾಸನ: ಜಿಲ್ಲೆಯ ಹಲವೆಡೆ ಇಂದು ಬೆಳಗಿನ ಜಾವವೇ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಹೊಳೆನರಸೀಪುರ, ಅರಕಲಗೂಡು ತಾಲೂಕಿನಲ್ಲಿ ಲಘು ಭೂಕಂಪನ ಅನುಭವವಾಗಿದೆ. ಅರಕಲಗೂಡು ತಾಲೂಕಿನ ಮುದ್ದನಹಳ್ಳಿ, ಹನೆಮಾರನಹಳ್ಳಿ, ಕಾರಹಳ್ಳಿ, ಗ್ರಾಮಗಳಲ್ಲಿ ಕಂಪಿಸಿದೆ. ಹಾಸನ ತಾಲೂಕಿನ ಮಲ್ಲೆದೇವರಪುರ, ಕಾರ್ಲೆ ಅಂಕನಹಳ್ಳಿ ಗ್ರಾಮಗಳಲ್ಲೂ ಕಂಪಿಸಿದೆ. ಹೊಳೆನರಸೀಪುರ ಪಟ್ಟಣದ ಹಳ್ಳಿ ಮೈಸೂರು ಗ್ರಾಮದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಬೆಳಗಿನ ಜಾವ 4.38 ರಲ್ಲಿ ಘಟನೆ ನಡೆದಿದ್ದು, ಸವಿನಿದ್ದೆಯಲ್ಲಿದ್ದ ಜನರು ಮನೆಯಿಂದ ಹೊರಗೆ ಓಡಿ ಬಂದು ಆತಂಕ ವ್ಯಕ್ತಪಡಿಸಿದರು. … Continue reading ಬೆಳ್ಳಂಬೆಳಗ್ಗೆ ಹಾಸನದ ಹಲವೆಡೆ ಕಂಪಿಸಿದ ಭೂಮಿ: ಭೂಕಂಪನ ದೃಢಪಡಿಸಿದ ಅಧಿಕಾರಿಗಳು
Copy and paste this URL into your WordPress site to embed
Copy and paste this code into your site to embed