ಟಿ.ನಗರ: ಗೋಣಿ ಚೀಲದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಕೊಂದು ಮೂಟೆ ಕಟ್ಟಿ ಎಸೆಯಲಾಗಿದೆ ಎಂಬ ವಾಟ್ಸ್ಆ್ಯಪ್ ಸಂದೇಶ ಸಂಚಲನ ಸೃಷ್ಟಿಸಿದ ಘಟನೆ ತಮಿಳುನಾಡಿನ ನಾಗರ್ಕೋಯಿಲ್ ರೈಲು ನಿಲ್ದಾಣದಲ್ಲಿ ನಡೆದಿದೆ.
ರೈಲು ನಿಲ್ದಾಣದ ಮೊದಲನೇ ಫ್ಲಾಟ್ಫಾರ್ಮ್ನಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿದೆ. ರೈಲುಗಳು ಕೇವಲ ಎರಡನೇ ಫ್ಲಾಟ್ಫಾರ್ಮ್ನಲ್ಲಿ ಮಾತ್ರ ಓಡಾಡುತ್ತಿದೆ. ಇಂದು ಬೆಳಗ್ಗೆ ಅನೇಕ ಮಂದಿ ರೈಲು ನಿಲ್ದಾಣದಲ್ಲಿ ಓಡಾಡುವಾಗ ಇಡೀ ದೇಹ ಹಳದಿ ಬಣ್ಣದ ಗೋಣಿ ಚೀಲದಲ್ಲಿ ಸುತ್ತಿರುವಂತೆ ಫ್ಲಾಟ್ಫಾರ್ಮ್ ಬಳಿ ಕಾಣುತ್ತದೆ.
ಇದನ್ನು ನೋಡಿದ ಮಂದಿ ಯಾರದ್ದೋ ಕೊಲೆಯಾಗಿರಬಹುದೆಂದು ತಮ್ಮಷ್ಟೇ ತಾವೇ ಊಹಿಸಿಕೊಂಡು ಫೋಟೋ ತೆಗೆದು ವಾಟ್ಸ್ಆ್ಯಪ್ನಲ್ಲಿ ಹರಿಬಿಡುತ್ತಾರೆ. ಈ ಮಾಹಿತಿ ಪೊಲೀಸರಿಗೂ ತಲುಪಿ ಘಟನಾ ಸ್ಥಳಕ್ಕೆ ಪರಿಶೀಲನೆಗೆಂದು ಪೊಲೀಸರು ತೆರಳುತ್ತಾರೆ.
ಇದನ್ನೂ ಓದಿರಿ: ನೀನು ಸತ್ತ ಮೇಲೆ ಮಗ ನನ್ನ ಜತೆ ಇರಬೇಕು ಅಂತಿದ್ದಾರೆ ವಿಚ್ಛೇದಿತ ಪತಿ- ಹೀಗೆ ಕಂಡೀಷನ್ ಹಾಕ್ಬೋದಾ?
ಇನ್ನೇನು ಗೋಣಿ ಚೀಲದ ಕಡೆ ಪೊಲೀಸರು ಹೋಗಬೇಕು ಎನ್ನುವಷ್ಟರಲ್ಲಿ ಓರ್ವ ವ್ಯಕ್ತಿ ದಿಢೀರನೇ ಗೋಣಿ ಚೀಲದಿಂದ ಮೇಲೆದ್ದು ಬರಿಗಾಲಲ್ಲಿ ಸುಮ್ಮನೇ ನಡೆದುಕೊಂಡು ಹೋಗುತ್ತಾನೆ. ಈ ವೇಳೆ ಅಲ್ಲಿ ನೆರೆದಿದ್ದ ಮಂದಿ ಒಬ್ಬರಿಗೊಬ್ಬರ ಮುಖವನ್ನು ನೋಡಿಕೊಂಡು ನಗುತ್ತಾರೆ.
ಸ್ಥಳಕ್ಕೆ ಬಂದ ಪೊಲೀಸರು ಸಹ ಒಂದು ವಾಟ್ಸ್ಆ್ಯಪ್ ಸಂದೇಶ ಏನೆಲ್ಲಾ ಮಾಡಿತು ನೋಡಿ ಎಂದು ಸುಮ್ಮನ್ನೇ ನಕ್ಕು ಬಂದ ದಾರಿಯಲ್ಲೇ ಹಿಂದಿರುತ್ತಾರೆ. ಅಂದಹಾಗೆ ಗೋಣಿಚೀಲದಲ್ಲಿ ಇದ್ದಿದ್ದ ವ್ಯಕ್ತಿ ತನ್ನ ಇಡೀ ದೇಹವನ್ನು ಮುದರಿಕೊಂಡು ಮಲಗಿದ್ದು, ಗೋಣಿ ಚೀಲ ಕಟ್ಟಿದಂತೆ ಭಾಸವಾಗಿ, ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. (ಏಜೆನ್ಸೀಸ್)
ಇನ್ನೂ ಸುಂದರಿಯಾಗಲು ಚಿಕಿತ್ಸೆ ಪಡೆದ ಖ್ಯಾತ ನಟಿ ಕನ್ನಡಿ ನೋಡಿದಾಗ ಮೂರ್ಛೆ ಹೋದಳು!
ಸರ್ಕಾರಿ ಕಚೇರಿಯಲ್ಲೇ ಮಹಿಳೆ ಜತೆ ಸರಸ: ವಿಡಿಯೋ ವೈರಲ್ ಬೆನ್ನಲ್ಲೇ ರೆವಿನ್ಯೂ ಇನ್ಸ್ಪೆಕ್ಟರ್ ಅರೆಸ್ಟ್!