ಮದ್ವೆಗೆ ಬಟ್ಟೆ ಖರೀದಿಸಲು ಹೋಗಿದ್ದ ಸಹೋದರರಿಬ್ಬರಲ್ಲಿ ತಮ್ಮ ಶವವಾಗಿ ಪತ್ತೆ, ಅಣ್ಣ ನಾಪತ್ತೆ

ದಾವಣಗೆರೆ: ಮದುವೆಗೆ ಬಟ್ಟೆ ಖರೀದಿಸಲು ಹೋಗಿದ್ದ ಸಹೋದರರಿಬ್ಬರಲ್ಲಿ ತಮ್ಮ ಶವವಾಗಿ ಪತ್ತೆಯಾಗಿದ್ದು, ಅಣ್ಣ ನಾಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹರಿಹರದ ವಿಜಯನಗರ ನಿವಾಸಿ ಅಲ್ತಾಫ್ (21) ಶವವಾಗಿ ಪತ್ತೆಯಾದ ಯುವಕ. ಈತನ ಸಹೋದರ ಇಬ್ರಾಹಿಂ (23) ನಾಪತ್ತೆಯಾಗಿದ್ದಾನೆ. ಅಲ್ತಾಫ್​ ಶವ ಕುತ್ತಿಗೆ ಕೊಯ್ದು ಸ್ಥಿತಿಯಲ್ಲಿ ದಾವಣಗೆರೆಯ ಮಹಾಲಕ್ಷ್ಮೀ ಲೇಔಟ್ ಬಳಿ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಅಲ್ತಾಫ್ ಹಾಗೂ ಇಬ್ರಾಹಿಂ ಸೋದರಸಂಬಂಧಿಗಳು. ಇಬ್ರಾಹಿಂಗೆ ಮದುವೆ ಫಿಕ್ಸ್ ಅಗಿತ್ತು. ಹೀಗಾಗಿ ಮದುವೆ ಜವಳಿ ಖರೀದಿಸಲು ಮಂಗಳವಾರ ದಾವಣಗೆರೆಗೆ ಹೋಗಿದ್ದರು. … Continue reading ಮದ್ವೆಗೆ ಬಟ್ಟೆ ಖರೀದಿಸಲು ಹೋಗಿದ್ದ ಸಹೋದರರಿಬ್ಬರಲ್ಲಿ ತಮ್ಮ ಶವವಾಗಿ ಪತ್ತೆ, ಅಣ್ಣ ನಾಪತ್ತೆ