More

    ಒಂದು ಮಗುವಿನ ತಂದೆಯೊಂದಿಗೆ ಸಂಬಂಧ! ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಜಯಶ್ರೀ ಆರಾಧ್ಯ

    ಬೆಂಗಳೂರು: ‘ಬಿಗ್​ ಬಾಸ್​ ಒಟಿಟಿ ಕನ್ನಡ’ದ ಮೊದಲ ಸೀಸನ್​ ಆರಂಭವಾಗಿ ಇಂದಿಗೆ ನಾಲ್ಕು ದಿನಗಳು ಕಳೆದಿವೆ. ಈಗಾಗಲೇ ವೀಕ್ಷಕರಿಗೆ 16 ಸ್ಪರ್ಧಿಗಳ ಪರಿಚಯವಾಗಿದೆ. ಮೊದಲ ವಾರವೇ ಸೋನು ಗೌಡ, ಸ್ಫೂರ್ತಿ ಗೌಡ, ಆರ್ಯವರ್ಧನ್​ ಗುರೂಜಿ, ಜಯಶ್ರೀ ಆರಾಧ್ಯ, ನಂದು, ಜಶ್ವಂತ್​ ಬೋಪಣ್ಣ, ಕಿರಣ್​ ಯೋಗೇಶ್ವರ್​ ಮತ್ತು ಅಕ್ಷತ ಕುಕಿ ನಾಮಿನೇಟ್​ ಆಗಿದ್ದು, ಈ ವಾರ ಬಿಗ್​ಬಾಸ್​ ಮನೆಯಿಂದ ಹೊರ ಹೋಗಲಿದ್ದಾರೆ ಎಂಬ ಕುತೂಹಲ ಮೂಡಿದೆ.

    ಇನ್ನು ಬಿಗ್​ಬಾಸ್​ ಕರ್ಟನ್​ ರೈಸರ್​ ಕಾರ್ಯಕ್ರಮದ ಬಳಿಕ ಮನೆಯೊಳಗೆ ಸ್ಪರ್ಧಿಗಳ ಮೊದಲ ದಿನವೇ ತಮ್ಮ ಕಹಿ ನೆನಪುಗಳನ್ನು ಹಂಚಿಕೊಂಡರು. ಈ ವೇಳೆ ಸ್ಪರ್ಧಿಗಳಲ್ಲಿ ಒಬ್ಬರಾದ ಜಯಶ್ರೀ ಆರಾಧ್ಯ ಬಿಚ್ಚಿಟ್ಟು ಸಂಗತಿಗಳು ಇತರೆ ಸ್ಪರ್ಧಿಗಳ ಜೊತೆಗೆ ಪ್ರೇಕ್ಷಕರ ಹುಬ್ಬೇರಿಸಿದೆ. ಹಾಗಾದ್ರೆ, ಜಯಶ್ರೀ ಹೇಳಿದ್ದೇನು? ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಮುಂದಿದೆ.

    ವಿವಾಹಿತ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಟಿದ್ದಾಗಿ ಜಯಶ್ರೀ ಹೇಳಿಕೊಂಡಿದ್ದಾರೆ. ಮದುವೆಯಾಗಿ ಒಂದು ಮಗು ಇದ್ದ ವ್ಯಕ್ತಿಯ ಜೊತೆ ಡೇಟಿಂಗ್​ ಮಾಡಿದೆ. ಯಾವ ರೀತಿ ಜೂಜಾಡಬೇಕು ಎಂಬುದನ್ನು ಕಲಿತೆ. ಸುಮಾರು ಒಂದೂವರೆ ವರ್ಷಗಳವರೆಗೆ ನಾನು ಜೂಜಾಟದಲ್ಲಿ ಮುಳುಗಿದ್ದೆ. ಆದರೆ, ಜೂಜು ನನ್ನನ್ನು ನಾನೇ ಅಹಸ್ಯಪಟ್ಟುಕೊಳ್ಳುವಂತೆ ಮಾಡಿದ್ದರಿಂದ, ನಾನದನ್ನು ತೊರೆದೆ ಎಂದು ಜಯಶ್ರೀ ಹೇಳಿದ್ದಾರೆ.

    ವಿವಾಹಿತನೊಂದಿಗೆ ಸಂಬಂಧ ಬೆಳೆಸಲು ಕಾರಣ ಹೇಳಿದ ಜಯಶ್ರೀ, ಆ ಸಮಯದಲ್ಲಿ ನಮ್ಮಿಬ್ಬರಿಗೂ ಒಂದು ಬೆಂಬಲ ಬೇಕಿತ್ತು. ಹೀಗಾಗಿ ನಾವಿಬ್ಬರು ಪರಸ್ಪರ ಜೊತೆಯಾದೆವು. ಇದೇ ಸಂದರ್ಭದಲ್ಲಿ ತನ್ನ ಮಾಜಿ ಪ್ರೇಮಿಗೆ ಕ್ಯಾನ್ಸರ್ ಇರುವುದನ್ನು ಬಿಚ್ಚಿಟ್ಟ ಜಯಶ್ರೀ, ದೀರ್ಘಕಾಲದ ಕಾಯಿಲೆಯಿಂದ ಅವನು ತುಂಬಾ ಬಳಲುತ್ತಿದ್ದರಿಂದ ನಾನು ಆತನನ್ನು ಬಿಡಲಾಗಲಿಲ್ಲ ಎಂದರು.

    ಕುಟುಂಬದ ಸದಸ್ಯರ ಚುಚ್ಚು ಮಾತುಗಳನ್ನು ಸಹಿಸಲಾರದೇ ಒಮ್ಮೆ ನಾನು ಮನೆ ಬಿಟ್ಟು ಓಡಿ ಹೋಗಿದ್ದೆ. ನಾನು ದ್ವಿತೀಯ ಪಿಯುಸಿ ಡ್ರಾಪೌಟ್​. ನನ್ನ ಜೀವನದಲ್ಲಿ ಯಶಸ್ವಿಯಾಗದಿದ್ದಕ್ಕೆ ಕುಟುಂಬದ ಸದಸ್ಯರು ನನ್ನನ್ನು ಆಗಾಗ ಹೀಯಾಳಿಸುತ್ತಿದ್ದರು. ಅದನ್ನು ಸಹಿಸಲಾರದೇ ನಾನು ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದೆ.

    ಮನೆ ಬಿಟ್ಟು ಹೋಗಿ ಏನಾದರೂ ಸಾಧನೆ ಮಾಡಬೇಕೆಂದುಕೊಂಡಿದ್ದೆ. ಆದರೆ, ನಂತರದ ದಿನಗಳಲ್ಲಿ ನನ್ನ ನಿರ್ಧಾರವೇ ನನಗೆ ಮುಳುವಾಯಿತು. ನಾನು ಜೂಜಾಟಕ್ಕೆ ದಾಸಳಾದ್ದರಿಂದ ಎಲ್ಲವನ್ನು ಕಳೆದುಕೊಂಡೆ. ಆದರೆ, ಕೆಟ್ಟ ದಿನಗಳ ಕರಗಿ ಹೋಗಿ ಒಳ್ಳೆಯ ದಿನಗಳು ಸಹ ನನ್ನ ಬಾಳಲ್ಲಿ ಬಂದಿತು. ಸಮಯ ಕಳೆದಂತೆ ಉದ್ಯಮಿಯಾಗಿ ಬದಲಾದೆ ಮತ್ತು ಪ್ರಸ್ತುತ ತನ್ನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

    ನನ್ನ ಪಾಲಕರನ್ನು ನಾನು ಮರಳಿ ಸೇರಿದ್ದೇನೆ. ನನ್ನ ಕುಟುಂಬದಲ್ಲಿ ಸಂಪಾದಿಸುವ ಏಕೈಕ ಮಹಿಳೆಯಾಗಿದ್ದು, ತಂದೆ ತಾಯಿ ಮತ್ತು ಅಣ್ಣನನ್ನು ನಾನು ನೋಡಿಕೊಳ್ಳುತ್ತಿದ್ದೇನೆ ಎಂದು ಜಯಶ್ರೀ ಆರಾಧ್ಯ ಬಿಗ್​ಬಾಸ್​ ಒಟಿಟಿ ವೇದಿಕೆಯಲ್ಲಿ ಹೇಳಿಕೊಂಡರು. ಆದರೆ, ಕಷ್ಟದ ದಿನಗಳಲ್ಲಿ ನನ್ನೊಂದಿಗೆ ನನ್ನ ಅಪ್ಪ-ಅಮ್ಮ ಇರಲಿಲ್ಲ. ಹೀಗಾಗಿ ನಾನು ಅವರ ಮೇಲೆ ಇರುವ ಪ್ರೀತಿಯನ್ನು ಕಡಿದುಕೊಂಡಿದ್ದೇನೆ. ಆದರೆ, ನನ್ನ ಜವಬ್ದಾರಿ ಕಾರಣ ನಾನು ಅವರನ್ನು ನೋಡಿಕೊಳ್ಳುತ್ತಿದ್ದೇನೆ ಎಂದರು.

    ಅಂದಹಾಗೆ ಕನ್ನಡ ಬಿಗ್ ಬಾಸ್ ಚೊಚ್ಚಲ ಓಟಿಟಿ (OTT) ಸೀಸನ್​ನಲ್ಲಿ 12ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಜಯಶ್ರೀ ಆರಾಧ್ಯ, ಕನ್ನಡ ಕೆಲವು ಸಿನಿಮಾಗಳಲ್ಲಿ ನಟಿ ಪರಿಚಿತವಾಗಿರುವ ಮಾರಿಮುತ್ತು ಅವರ ಮೊಮ್ಮಗಳು ಕೂಡ ಹೌದು. ಉದ್ಯಮ ಮಾತ್ರವಲ್ಲದೆ, ಜಯಶ್ರೀ ಕಲಾವಿದೆಯಾಗಿಯು ಗುರುತಿಸಿಕೊಂಡಿದ್ದಾರೆ.

    ಸ್ಪರ್ಧಿಗಳ ಪಟ್ಟಿ ಈ ಕೆಳಕಂಡಂತಿದೆ
    ನಟರಾದ ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಸಾನಿಯಾ ಅಯ್ಯರ್, ರೂಪೇಶ್ ಶಟ್ಟಿ, ಅರ್ಜುನ್ ರಮೇಶ್, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್, ಪತ್ರಕರ್ತ ಸೋಮಣ್ಣ ಮಾಚಿಮಾಡ, ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ಸೋನು ಶ್ರೀನಿವಾಸ ಗೌಡ, ಸ್ಪೂರ್ತಿ ಗೌಡ, ಕಿರಣ್ ಯೋಗೇಶ್ವರ್, ಲೋಕೇಶ್, ಉದಯ್ ಸೂರ್ಯ, ಅಕ್ಷತಾ ಕುಕ್ಕಿ, ಜಶ್ವಂತ್-ನಂದು ಮತ್ತು ಜಯಶ್ರೀ ಆರಾಧ್ಯ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸ್ ಆಗಿ ಒಟ್ಟಿಗೆ ಸರ್ಕಾರಿ ಕೆಲಸ ಗಿಟ್ಟಿಸಿದ ಅಮ್ಮ-ಮಗ!

    ಮನೆಯವರು ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದು ಸಾವಿನ ಹಾದಿ ಹಿಡಿದ ಪ್ರೇಮಿಗಳು

    ಹೊಳೆಯುವುದೆಲ್ಲ ಚಿನ್ನವಲ್ಲ! Instagram ರೀಲ್ಸ್ ಸ್ಟಾರ್​ ಬಂಧನದ ಬೆನ್ನಲ್ಲೇ ಪೊಲೀಸರ ಸಂದೇಶ ವೈರಲ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts