ಸ್ಯಾಂಡಲ್​ವುಡ್​ಗೆ ದೊಡ್ಮನೆಯ ಮತ್ತೊಂದು ಕುಡಿ ಎಂಟ್ರಿ: ಹೊಂಬಾಳೆ ಸಂಸ್ಥೆಯಿಂದಲೇ ಯುವರಾಜ್​ ಪದಾರ್ಪಣೆ

ಬೆಂಗಳೂರು: ವರನಟ ಡಾ. ರಾಜ್​ಕುಮಾರ್​ ಕುಟುಂಬದ ಅಭಿಮಾನಿಗಳಿಗೆ ಈ ದಿನ ಮರೆಯಲಾಗದ ಸುದಿನವಾಗಿದೆ. ಸ್ಯಾಂಡಲ್​​ವುಡ್​ಗೆ ಅಣ್ಣಾವ್ರ ಕುಟುಂಬದ ಮತ್ತೊಂದು ಕುಡಿ ಎಂಟ್ರಿಯಾಗಿದೆ. ಸ್ಯಾಂಡಲ್​ವುಡ್ “ಯುವರಾಜ್”ನಿಗೆ ಇಂದು ಪಟ್ಟಾಭಿಷೇಕವಾಗಿದೆ. ಯಂಗ್ ಪವರ್​ ಸ್ಟಾರ್​ ಅವರನ್ನು ಹೊಂಬಾಳೆ ಸಿನಿಮಾ ಸಂಸ್ಥೆ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದು, ಹೊಸ ಸಿನಿಮಾ ಘೋಷಣೆಯಾಗಿದೆ. ಪುನೀತ್​ ರಾಜ್​ಕುಮಾರ್​ ಅವರ ನೆಚ್ಚಿನ ನಿರ್ದೇಶಕ ಸಂತೋಷ್​ ಆನಂದ​ರಾಮ್ ಯುವ ರಾಜ್​ಕುಮಾರ್​​ಗೆ ನಿರ್ದೇಶನ ಮಾಡಲಿದ್ದಾರೆ. ಅಪ್ಪು ಸಿನಿಮಾ ಅನೌನ್ಸ್ ಮಾಡುವ ಮೂಲಕವೇ ಚಿತ್ರ ನಿರ್ಮಾಣಕ್ಕೆ ಹೊಂಬಾಳೆ ಸಿನಿಮಾ ಸಂಸ್ಥೆ ಚಿತ್ರರಂಗಕ್ಕೆ ಕಾಲಿಟ್ಟಿತು. … Continue reading ಸ್ಯಾಂಡಲ್​ವುಡ್​ಗೆ ದೊಡ್ಮನೆಯ ಮತ್ತೊಂದು ಕುಡಿ ಎಂಟ್ರಿ: ಹೊಂಬಾಳೆ ಸಂಸ್ಥೆಯಿಂದಲೇ ಯುವರಾಜ್​ ಪದಾರ್ಪಣೆ