ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಖಂಡಿಸಿ ಮೈಸೂರು ಬ್ಯೂಟಿಷಿಯನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸೋಮವಾರ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಭೂ ಲೋಕದ ಸ್ವರ್ಗ ಕಾಶ್ಮೀರದ ಪಹಲ್ಗಾಮ್ನಲ್ಲಿ ನಿಗರ್ಸದ ಸೌಂದರ್ಯ ಸವಿಯುತ್ತಿದ್ದ ಪ್ರವಾಸಿಗರ ಮೇಲೆ ಏಕಾಏಕಿ ದಾಳಿ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಈ ಅಮಾನವೀಯ ಕೃತ್ಯ ಎಸಗಿದ ಉಗ್ರರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಇನ್ನೆಂದು ಈ ರೀತಿಯ ಘಟನೆ ಮರುಕಳಿಸದಂತೆ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಮತ್ತು ಅಲ್ಲಿನ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಿವೃತ್ತ ಯೋಧರಾದ ಶ್ರೀನಿವಾಸ್ ನಂಜುಂಡಸ್ವಾಮಿ, ಪೊನ್ನಪ್ಪ, ಬಿಡ್ಡಪ್ಪ, ಮೈಸೂರು ಬ್ಯೂಟೀಷಿಯನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷೆ ವೇದ ರೈ, ಪದಾಧಿಕಾರಿಗಳಾದ ಪ್ರತಿಭಾ ಶೆಟ್ಟಿ, ಸಪ್ನಾ, ಮಾಲಿನಿ ಪಾಲಾಕ್ಷ, ಮಂಜುಳಾ, ನಸ್ರೀನ್, ರಾಜೇಶ್ವರಿ, ಪದ್ಮಿನಿ, ವೀಣಾ, ಜ್ಯೋತಿ ಶೆಟ್ಟಿ, ಶಾರದಾ ಇತರರಿದ್ದರು.