ಮಡಿಕೇರಿ: ಕೊಡಗು ಜಿಲ್ಲಾ ಮಹಿಳೋದಯ ಒಕ್ಕೂಟ ವತಿಯಿಂದ ಮಣಿಪುರದಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಯಿತು.
ಗಾಂಧಿ ಮೈದಾನದಲ್ಲಿ ಜಮಾವಣೆಗೊಂಡ ಮಹಿಳಾ ಸದಸ್ಯರು ಗಾಂಧಿ ಮೈದಾನದಿಂದ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣವನ್ನು ಖಂಡಿಸಿದರು.
ಪ್ರತಿಭಟನಾ ನಿರತರು ನಂತರ ಸರ್ಕಾರಕ್ಕೆ ಜಿಲ್ಲಾಡಳಿತಕ್ಕೆ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕೊಡಗು ಜಿಲ್ಲಾ ಮಹಿಳೋದಯ ಒಕ್ಕೂಟದ ಸಂಯೋಜಕಿ ಮೋಲಿ, ಕೊಡಗು ಜಿಲ್ಲಾ ಮಹಿಳೋದಯ ಒಕ್ಕೂಟದ ವಲಯ ಸಂಯೋಜಕಿ ಜಾಯಿ ಮೆನೇಜಸ್, ಕೊಡಗು ಜಿಲ್ಲಾ ಮಹಿಳೋದಯ ಒಕ್ಕೂಟದ ಅಧ್ಯಕ್ಷೆ ಚಿನ್ನಮ್ಮ, ಕಾರ್ಯಕರ್ತರಾದ ವಿಜಯ ನಾರಾಯಣ, ಕೊಡಗು ಜಿಲ್ಲಾ ಮಹಿಳೋದಯ ಒಕ್ಕೂಟದ ಸದಸ್ಯರು, ಸ್ವಸಹಾಯ ಗುಂಪಿನ ಸದಸ್ಯರು ಇದ್ದರು.