ಸವಣೂರ: ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಸೋಮವಾರ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಕೈಗೊಂಡರು.
ಎಬಿವಿಪಿ ಪದಾಧಿಕಾರಿಗಳು, ನೂರಾರು ವಿದ್ಯಾರ್ಥಿಗಳು ಒಂದು ಗಂಟೆಗೂ ಹೆಚ್ಚು ಕಾಲ ಬಸ್ ತಡೆದು, ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ನಂತರ, ಉಪ ತಹಸೀಲ್ದಾರ್ ಎಸ್.ಎಸ್. ಪಾಟೀಲ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡುವ ಮೂಲಕ ಬಡ, ಕೂಲಿ ಕಾರ್ವಿುಕರು, ಮಧ್ಯಮವರ್ಗದ ಜನತೆಗೆ ಹೊರೆ ಹೇರಿದೆ. ಸರ್ಕಾರಿ ಬಸ್ಗಳನ್ನೇ ಅವಲಂಬಿಸಿ ಸಾವಿರಾರು ಜನ ನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ಓಡಾಡುತ್ತಾರೆ, ಆದರೆ, ಶೇ. 15ರಷ್ಟು ಬಸ್ ಪ್ರಯಾಣದರ ಹೆಚ್ಚಳ ಮಾಡುವುದರ ಮೂಲಕ ಆರ್ಥಿಕ ಹೊರೆಯನ್ನು ಜನಸಾಮಾನ್ಯರ ಮೇಲೆ ರಾಜ್ಯ ಸರ್ಕಾರ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.
ಬಸ್ಗಳ ಸಂಖ್ಯೆ ಹೆಚ್ಚಿಸಿ-ಪ್ರಯಾಣ ದರವನಲ್ಲ: ಶಕ್ತಿ ಯೋಜನೆಯಿಂದಾಗಿ ನಿತ್ಯ ಬಸ್ಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿರುವುದು ಸರ್ಕಾರದ ಗಮನಕ್ಕೆ ಇದೆ. ಆದರೆ, ಬಸ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡದೆ ಪ್ರಯಾಣ ದರವನ್ನು ಹೆಚ್ಚಳ ಮಾಡಿರುವ ಕ್ರಮ ಖಂಡಿಸಿದರು. ಎಬಿವಿಪಿ ಸವಣೂರ ನಗರ ಕಾರ್ಯದರ್ಶಿ ಅನುಪಕುಮಾರ ಗಾಣಿಗೇರ, ಪ್ರಮುಖರಾದ ಕಿರಣಕುಮಾರ ವಿವೇಕವಂಶಿ, ಈರಯ್ಯ ಹಿರೇಮಠ, ವಿದ್ಯಾರ್ಥಿಗಳಾದ ಹರೀಶ ಪಾಟೀಲ, ಬಸನಗೌಡ ಕರೆಸೋಮನಗೌಡ್ರ, ಅರುಣ ಮೆಕ್ಕಿ, ಶಿವನಗೌಡ, ಪ್ರದೀಪ ಭೋವಿ, ವಿನಾಯಕ ಮಿರ್ಜಿ, ಅರುಣ ಸಂಕ್ಲಿಪುರ, ರಾಜಶೇಖರ ರಾಗಿ, ತಾಜುದ್ದೀನ, ವಿರಾಟ ಹಿರೇಮಠ, ಮಹೇಶ ದೇಸಾಯಿ, ಶ್ರೇಯಾ ದೊಡ್ಡಗೌಡ್ರ, ಪವಿತ್ರಾ, ನಿರ್ಮಲಾ, ವೀಣಾ ಹತ್ತಿ, ವಿನಾಯಕ ಕುಲಕರ್ಣಿ ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.